ತುಮಕೂರು : ದೂರು ಕೊಟ್ಟರು ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಕಾರ್ಯನಿರ್ವಾಹಕ ಅಧಿಕಾರಿ,ತಾಪಂ ಕಚೇರಿ ಬಳಿ ಕಡಪಲಕೆರೆ ಗ್ರಾಮಸ್ಥರ ಪ್ರತಿಭಟನೆ
ಕೂಲಿ ಕಾರ್ಮಿಕರು ಮಾಡುವಂತಹ ಕೆಲಸವನ್ನು ಜೆಸಿಬಿ ಮೂಲಕ ಮಾಡಿಸಲಾಗುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದ ಪಾವಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಅವರಿಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಇರುವ ಕೋಟ ಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಕೆರೆ ಗ್ರಾಮದ ಗ್ರಾಮಸ್ಥರು ದಿನಾಂಕ, 21/02/25 ಶುಕ್ರವಾರ ಸಂಜೆ 4:00 ಸಂದರ್ಭದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದರು
ಈ ಸಂದರ್ಭದಲ್ಲಿ ಮುಖಂಡ ನಾಗರಾಜ್ ಮಾತನಾಡಿ ಕೆಲ ದಿನಗಳ ಹಿಂದೆ ನಾವು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಜನರು ಮಾಡಬೇಕಾದಂತಹ ನರೇಗಾ ಕೆಲಸಗಳನ್ನ ಜೆಸಿಬಿ ಗಳ ಮೂಲಕ ಮಾಡಿಸಲಾಗುತ್ತಿದ್ದು, ಅವರ ವಿರುದ್ಧ ಫೋಟೋ ವಿಡಿಯೋಗಳ ಸಮೇತ ನಾವು ಅವರಿಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಇಓ ಕಚೇರಿಗೆ ಶುಕ್ರವಾರ ಸಂಜೆ 3:00 ಗಂಟೆ ಸಮಯಕ್ಕೆ ಹೋಗಿದ್ದೇವೆ ನಾವು ಇ ಓ ಹತ್ತಿರ ಹೋಗಿ ಸಾರ್ ನಾವು ಅರ್ಜಿ ಕೊಟ್ಟಿರುವ ವಿಚಾರ ಏನು ಮಾಡಿದಿರಾ ಅಂತ ಕೇಳಿದ್ದಕ್ಕೆ ಇ ಓ ಜಾನಕಿ ರಾಮ್ ಮಾತನಾಡಿ ನಮ್ಮನ್ನು ಏಕವಚನದಲ್ಲಿ ಮಾತನಾಡಿ ನಾನು ಜೆಸಿಪಿ ಗಳಿಂದ ಕಾಮಗಾರಿಗಳನ್ನು ಮಾಡಿರುವ ಅಂಥವರಿಗೆ ನಾನು ಹಣ ಅಥವಾ ಬಿಲ್ ಅವರ ಖಾತೆಗೆ ಜಮಾ ಮಾಡಿಕೊಡ್ತೀನಿ ಎಂದು ಘಂಟಾ ಘೋಷವಾಗಿ ಮಾತನಾಡಿ ನೀವು ಅದೇನು ಮಾಡ್ಕೊಂತಿರೋ ಮಾಡ್ಕೊಳ್ಳಿ ಎಂದು ಇಓ ಜಾನಕಿ ರಾಮ್ ಮಾತನಾಡಿರುತ್ತಾರೆ ಎಂದು ಹೇಳಿ ಅದಕ್ಕೆ ಈ ಒಂದು ಅಕ್ರಮದಲ್ಲಿ ಪಿಡಿಒ ಭವ್ಯ. ಎನರ್ಜಿ ನೆರೆಗಾ ಇಂಜಿನಿಯರ್ ಅಶ್ವಿನಿ.ಕಂಪ್ಯೂಟರ್ ಆಪರೇಟರ್, ಯಶು ಇ ಓ ಕಾರ್ಯನಿರ್ವಹಣಾ ಅಧಿಕಾರಿ ಜಾನಕಿ ರಾಮ್ ಅವರು ಶಾಮಿಲ್ ಆಗಿದ್ದಾರೆ ಎಂದು ಅನುಮಾನವನ್ನು ವ್ಯಕ್ತಪಡಿಸುತ್ತಾ ಮಾತನಾಡಿದ್ದಾರೆ
ಪ್ರತಿಭಟನೆಯಲ್ಲಿ ರಾಜಕುಮಾರ್,ಮಂಜುನಾಥ್, ನಾಗಾರ್ಜುನ್, ಮಂಜೇಶ್, ಭಾಸ್ಕರ್, ಪ್ರದೀಪ್, ರಮೇಶ್, ನಾಗರಾಜು, ಮತ್ತಿತರರಿದ್ದರು
ವರದಿ: ಶಿವಾನಂದ