ಅರಸೀಕೆರೆ:ನಗರದಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರಸೀಕೆರೆ ಘಟಕದಲ್ಲಿ ಶರತ್ ಪ್ಯಾರಮೆಡಿಕಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ. ಘಟಕ ವ್ಯವಸ್ಥಾಪಕ ಕೃಷ್ಣಪ್ಪ ನಮ್ಮ ಘಟಕದ ಡೈವರ್ ನಿರ್ವಾಹಕ ಹಾಗೂ ಸಿಬ್ಬಂದಿ ವರ್ಗದವರು ಈ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಹಾಗೆ ನಮ್ಮ ಸಿಂಬದಿಗಳಲ್ಲಿ ಉದಾಸೀನತೆ ಇರುವುದರಿಂದ ತಾವುಗಳು ಸಮಯ ಸಿಕ್ಕಾಗ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಡೂರಿನ ಖ್ಯಾತ ಕಣ್ಣಿನ ತಜ್ಞ ಡಾಕ್ಟರ್, ಶರತ್ ಆರ್, ಯಜಮಾನ ತಪಾಸಣೆಗೆ ಬಂದಂತ ನೊರಾರು ಜನರಿಗೆ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಹರ್ಷ, ಕೌಶಿಕ್, ಕಾರ್ತಿಕ್, ಮೋಹನ್,ಮುರುಗೇಶ್, ನಾಗರಾಜ್,ಯೋಗೀಶ್ ಶಾಂತು.ಚರಣ್,ಹಾಗು ಸಿಬ್ಬಂದಿವರ್ಗ ಹಾಜರಿದ್ದರು..
ವರದಿ:ರಾಜು ಅರಸೀಕೆರೆ