ಧಾರವಾಡ : ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ತಪಾಸನೆ ಮಾಡಲಾಯಿತು.
ಹಲವಾರು ಕಾರ್ಯಗಳನ್ನು ಮಾಡಬರುತ್ತಿರುವ ಸೇವಾ ಭಾರತಿ ಟ್ರಷ್ಟಿ ಯಾದಂತಹ ಶ್ರೀ ಮಂಜುನಾಥ ಶಿವಪ್ಪ ಮಕ್ಕಳಗೇರಿ ಯವರ ತಂಡದಿಂದ ಪ್ರತಿಷ್ಠಿತ ವಾಸನ್ ಐ ಕೇರ್ ನುರಿತ ವೈದ್ಯಕೀಯ ತಂಡದಿಂದ ಗ್ರಾಮದ ಒಟ್ಟು 189 ಹಿರಿಯರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿದರು. ಅದರಲ್ಲಿ 18 ಜನರಿಗೆ ಉಚಿತ ಕಣ್ಣಿನ ಆಪರೇಷನ್ ತಪಾಸಣೆ ಮಾಡಲು ಭರವಸೆ ನೀಡಿದ್ದಾರೆ.
ಈ ವಂದು ಕಾರ್ಯಕ್ಕೆ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,ಹಾಗೂ ದೇವಿ ಜಾತ್ರೆಯ ದಿನದಂದು ಮಾಡಿರುವ ಈ ಕೆಲಸ ಒಳ್ಳೆಯದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಂಧರ್ಭದಲ್ಲಿ ಗ್ರಾಮದ ಗುರುಹಿರಿಯರು, ಯುವಕರು ಜಾತ್ರೆಗೆ ಬಂದ ಭಕ್ತಾದಿಗಳು ಇದ್ದರು.
ವರದಿ:ವಿನಾಯಕ ಗುಡ್ಡದಕೇರಿ