ಚಿಟಗುಪ್ಪ: ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಪ್ರಮಾಣದ ಮಳೆಯಿಂದ ಗ್ರಾಮದ ಇಸ್ಮಾಯಿಲ್ ಪಟೇಲ್ ಅವರ ಮನೆಯೊಳಗೆ ಮಳೆ ನೀರು ನುಗ್ಗಿತ್ತು.ಗ್ರಾಮ ಪಂಚಾಯತ ಸಿಬ್ಬಂದಿ ರೇವಣಸಿದ್ದಪ್ಪ ಚೀನಕೇರಿ ಅವರ ಗಮನಕ್ಕೆ ತಂದಾಗ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಜನಾರ್ಧನ ರೆಡ್ಡಿ ಮಾರ್ಗದರ್ಶನದ ಮೇರೆಗೆ ಕೂಡಲೇ ಆ ಮನೆಯ ಪಕ್ಕದಲ್ಲಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ಗ್ರಾಮ ಪಂಚಾಯತ ಸಿಬ್ಬಂದಿಗಳ ತುರ್ತು ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಸಜೀಶ್ ಲಂಬುನೋರ್




