ನಿಡಗುಂದಿ: ತಾಲೂಕಿನ ಇಟಗಿ ಗ್ರೌಮದ ಮಾರುತೇಶ್ವರ ನೂತನ ದೇವಸ್ಥಾನ ಹಾಗೂ ಮೂರ್ತಿ ಪುನರ್ ಪ್ರತಿಷ್ಠಾನ ಜಾತ್ರಾ ಮಹೋತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಸಂಜೆ ತೆರೆಬಿದ್ದಿದೆ.
ಗುರುವಾರ ಸಂಜೆ ನಾಡಿನ ಖ್ಯಾತ ಕಲಾವಿದರಾದ ಶ್ರೀ ಗಂಗಾವತಿ ಪ್ರಾಣೇಶ, ಶ್ರೀ ನರಸಿಂಹ ಜ್ಯೋಶಿ ಹಾಗೂ ಮಾಮನಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರಾಣೇಶ್ ಅವರ ಜೋಕುಗಳಿಗೆ ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಾಡಿತು. ಪ್ರಾಣೇಶ್ ಅವರ ಅನೇಕ ಹಾಸ್ಯ ಚಟಾಕಿಗೆ ಜನ ಬಿದ್ದು ಬಿದ್ದು ನಕ್ಕರು.
ಪ್ರಾಣೇಶ್ ಗಂಗಾವತಿ ಹಾಗೂ ನರಸಿಂಹ ಜ್ಯೋಶಿ , ಮಾಮನಿ ಅವರಿಗೆ ದೇವಸ್ಥಾನ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು.
ವರದಿ : ಅಲಿ ಮಕಾನದಾರ