ಹಟ್ಟಿ ಚಿನ್ನದ ಗಣಿ : ಪದ್ಮಾವತಿ ಎಜುಕೇಶನ್ ಟ್ರಸ್ಟ್, ಶ್ರೀ ಶಾರದ ವಿದ್ಯಾ ಚೇತನ ಪೂರ್ವ ಪ್ರಾಥಮಿಕ ಶಾಲೆ ಹಟ್ಟಿ ಆಯೋಜಿಸಲಾದ ಜ್ಞಾನದ ಬೆಳಕಲ್ಲಿ ಚಿನ್ನದ ಕಲರವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುಟ್ಟ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಮಕ್ಕಳು ತಮ್ಮ ಪೋಷಕರೊಂದಿಗೆ ವಿಶೇಷವಾದ ವಿಜ್ಞಾನ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಕಲೆ ಹಾಗೂ ಕ್ರೀಡಾ ವಿಷಯಗಳ ಚಿತ್ರಗಳನ್ನು ತಯಾರಿಸುವ ಮೂಲಕ ಶಾಲೆಯಲ್ಲಿ ಚಿತ್ರವನ್ನು ಪ್ರದರ್ಶಿಸಲಾಯಿತು,ಮಕ್ಕಳು ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಕನ್ನಡ ಮತ್ತು ಇಂಗ್ಲಿಷ್ ಮೂಲಕ ಸವಿಸ್ತಾರವಾಗಿ ವಿವರಣೆ ನೀಡಿದರು.
ಬಂದಂತಹ ಅತಿಥಿಗಳು ಮತ್ತು ಪೋಷಕರು ಪುಟ್ಟ ಮಕ್ಕಳಲ್ಲಿರುವ ಈ ಪ್ರತಿಮೆಯನ್ನು ಕಂಡು ಶ್ರೀ ಶಾರದಾ ವಿದ್ಯಾನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು ಈ ರೀತಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನದೊಂದಿಗೆ ಸಾರ್ವಜನಿಕರೊಂದಿಗೆ ಬೆರೆತು ಯಾವ ರೀತಿ ಮಾತನಾಡಬೇಕೆನ್ನುವುದು ತಿಳಿಯುವ ಉದ್ದೇಶದಿಂದ ಇಂಥ ಕಾರ್ಯಕ್ರಮ ಆಯೋಜಿಸಿದ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ಮಕ್ಕಳ ತಂದೆ ತಾಯಿ ಹಾಗೂ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದರು ಪುಟ್ಟ ಮಕ್ಕಳು ಒಬ್ಬರಿಗಿಂತ ಒಬ್ಬರು ನಾನೇನು ಕಡಿಮೆ ಇಲ್ಲ ಅನ್ನುವ ರೀತಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿವರಣೆ ನೀಡುತ್ತಿರುವುದು ಅದ್ಭುತವಾಗಿತ್ತು.
ಈ ಕಾರ್ಯಕ್ರಮಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ ಆರ್ ಪಿ ಚಂದ್ರಶೇಖರ್ ಕುಂಬಾರ್, ಮಲ್ಲಿಕಾರ್ಜುನ್ ಗೌಡ ಮಲಕನ್ ಮರಡಿ, ಶೇಕ್ ಹುಸೇನ್ ಸೌದಾಗರ್, ನಾರಾಯಣರಾವ್ ಕುಲಕರ್ಣಿ, ಜ್ಞಾನದ ಬೆಳಕಲ್ಲಿ ಚಿಲ್ಲರ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳೊಂದಿಗೆ ಪೋಷಕರು ತಯಾರು ಮಾಡಿರುವ ಚಿತ್ರ ಪ್ರದರ್ಶನ ವೀಕ್ಷಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ತಂದೆ ತಾಯಿ ಪೋಷಕರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು