Ad imageAd image

ಕಬ್ಬೂರ್ ಪಿಕೆಪಿಎಸ್ ರೇಷನ್ ಅಂಗಡಿಯಲ್ಲಿ ಪ್ರತಿ ಕಾರ್ಡಕ್ಕೆ ರೂ. 20 ರೂ. 2 ಕೆ.ಜಿ ಅಕ್ಕಿ ಕಮ್ಮಿ

Bharath Vaibhav
ಕಬ್ಬೂರ್ ಪಿಕೆಪಿಎಸ್ ರೇಷನ್ ಅಂಗಡಿಯಲ್ಲಿ ಪ್ರತಿ ಕಾರ್ಡಕ್ಕೆ ರೂ. 20 ರೂ. 2 ಕೆ.ಜಿ ಅಕ್ಕಿ ಕಮ್ಮಿ
WhatsApp Group Join Now
Telegram Group Join Now

ಚಿಕ್ಕೋಡಿ : ಕಬ್ಬೂರ್ ಪಿಕೆಪಿಎಸ್ ರೇಷನ್ ಅಂಗಡಿಯಲ್ಲಿ ಪ್ರತಿ ಕಾರ್ಡಕ್ಕೆ ರೂ. 20 ರೂ. 2 ಕೆ.ಜಿ ಅಕ್ಕಿ ಕಮ್ಮಿ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಎಂಬ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ಕಬ್ಬೂರ ಸುಮಾರು ನೂರು ವರ್ಷಗಳ ಹಳೆಯ ನ್ಯಾಯ ಬೆಲೆ ಅಂಗಡಿಯಾಗಿದ್ದು, ಇವರು ಅಕ್ಕಿ ಕಳ್ಳತನಕ್ಕೆ ಮುಂದಾಗಿದ್ದಾರೆ.

ಪಡಿತರ ಚೀಟಿ ದಾರರ್ ಕಣ್ಣು ಮುಂದೆಯೇ ಮೆಷಿನ್ ಗಳಲ್ಲಿ ವ್ಯತ್ಯಾಸ ಮಾಡಿ 2 kg,1 kg ಯಿಂದ 1 ವರೆ kg ಹಾಗೂ 1/2 ಅರ್ಧ ಕೆಜಿ ಅಕ್ಕಿಯನ್ನು ಕಾಟಾದಲ್ಲಿ ಹೊಡೆಯುತ್ತಿರುವ ಈ ನ್ಯಾಯಬೆಲೆ ಅಂಗಡಿಯವರು ಅಕ್ಕಿ ಕಡಿಮೆ ಕೊಡುವುದಲ್ಲದೆ,ಪ್ರತಿ ಕಾರ್ಡ ದಾರರಿಂದ 20 ರೂಪಾಯಿ ಹಣವನ್ನು ಪಡೆಯುತ್ತಾರೆ, ಅಲ್ಲದೆ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಈ ನ್ಯಾಯಬೆಲೆ ಅಂಗಡಿಯವರು.

ಈ ನ್ಯಾಯಬೆಲೆ ಅಂಗಡಿಯಿಂದ ಅಧಿಕಾರಿಗಳಿಗೆ ಎಷ್ಟು ಪಾಲು ಹೋಗುತ್ತದೆ. ಅಧಿಕಾರಿಗಳು ಲಂಚವೆಂಬ ಸಾಮ್ರಾಜ್ಯದಲ್ಲಿ ಮುಳುಗಿದ್ದಾರಾ ಹೇಗೆ ಜನರಿಗೆ ಮೋಸ ಮಾಡುವುದೇ ಇವರ ಉದ್ದೇಶ ಪೂರ್ವಕ ಕೆಲಸ ಆಗಿದೆ ಏನೋ ಅನಿಸುತ್ತಿದೆ.

ಈಗಲಾದರೂ ಸಂಭಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ನೋಡೋಣ. ಜನರಿಗೆ ನ್ಯಾಯ ಕೊಡಿ ಸರ್ ಅನ್ಯಾಯ ಮಾಡಬೇಡಿ ದಯವಿಟ್ಟು ಹಸಿವು ಮುಕ್ತ ಕರ್ಣಾಟಕ ಮಾಡಿ ಸಾರ್ ಇದೊಂದು ಜನರ ಬೇಡಿಕೆಯಾಗಿದೆ.

 

WhatsApp Group Join Now
Telegram Group Join Now
Share This Article
error: Content is protected !!