ಸವಣೂರು : ಕಾರ್ಮಿಕ ಇಲಾಖೆಯಲ್ಲಿ ಕಂಡು ಕಾಣರಿಯದ ಕರ್ಮಕಾಂಡ ಹೌದು ಸವಣೂರು ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ಕಂಡು ಕಾಣರಿಯದ ಕರ್ಮಕಾಂಡವೊಂದು ಬೆಳಕಿಗೆ ಬಂದಿದೆ.
ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರದಿಂದ ಸಿಗಲಿರುವ ಸೌಲಭ್ಯಗಳನ್ನು ಹಣದ ಆಮಿಷದಿಂದ ಕೆಲವರ ಪಾಲಾಗುತ್ತಿರುವ ಅಮಾನುಷ ಘಟನೆಯೊಂದು ಸವಣೂರು ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ.
ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್ ಸಾಹೇಬ್ರೆ ನಿಮ್ಮ ಅಧಿಕಾರಿಗಳ ಈ ಕಣ್ಣಾಮುಚ್ಚಾಲೆ ಆಟ ನಿಮಗೆ ಕಾಣ್ತಿಲ್ವಾ.
ಲಂಗು ಲಗಾಮಿಲ್ಲದ ಲೇಬರ ಇಲಾಖೆಯಲ್ಲಿ ಗೋಲ್ ಮಾಲ್ ಮಾಡುತ್ತಿರುವ ಅಧಿಕಾರಿಗಳ ಕಳ್ಳಾಟ ಬಟಾಬಯಲು ಮಾಡಲಿರುವ ನಮ್ಮ ಮಾದ್ಯಮ ತಂಡ.
ಈ ಕರ್ಮಕಾಂಡದ ರಣರೋಚಕ ಇನ್ನಷ್ಟು ಮಾಹಿತಿಯನ್ನು ಹೆಕ್ಕಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದೇವೆ ಅತಿ ಶೀಘ್ರದಲ್ಲಿ.
ವರದಿ : ನಾಗರಾಜ ವನಳ್ಳಿ