Ad imageAd image

ಅಲೆಮಾರಿ ಬುಡ್ಗ ಜಂಗಮ ಜಾತಿಯ ಯುವತಿಯರ ಸಾವು ಸಂಶಯಾಸ್ಪದ : ಅಂಬೇಡ್ಕರ ಜಿಲ್ಲಾ ಅಧ್ಯಕ್ಷ ಮಹೇಶ್

Bharath Vaibhav
ಅಲೆಮಾರಿ ಬುಡ್ಗ ಜಂಗಮ ಜಾತಿಯ ಯುವತಿಯರ ಸಾವು ಸಂಶಯಾಸ್ಪದ : ಅಂಬೇಡ್ಕರ ಜಿಲ್ಲಾ ಅಧ್ಯಕ್ಷ ಮಹೇಶ್
WhatsApp Group Join Now
Telegram Group Join Now

ಗುರುಮಠಕಲ್ : ಗುರುಮಠಕಲ್ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಗುರುಮಠಕಲ್ ತಾಲೂಕಿನಲ್ಲಿ ಇಂದಿರಾ ನಗರ ಅಲೆಮಾರಿ ಬುಡ್ಗ ಜಂಗಮ ಜಾತಿಯ ಇಬ್ಬರು ಯುವತಿಯರ ಸಾವು ಸಂಶಯಾಸ್ಪವಾಗಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತೆಲಂಗಾಣ ರಾಜ್ಯದ ನಾರಾಯಣಪೆಟ್ ಜಿಲ್ಲೆಯ ಅಂಬೇಡ್ಕರ ಜಿಲ್ಲಾ ಅಧ್ಯಕ್ಷ ಮಹೇಶ್ ಮಾತನಾಡಿ ಸ್ವಾಂತ್ವನ ತಿಳಿಸಿದರು

ಗುರುಮಠಕಲ್‌ ಪಟ್ಟಣದ ಇಂದಿರಾ ನಗರದ ವಾರ್ಡ್‌ ನಂ. 10 ರ ಅಲೆಮಾರಿ ವೇಷಗಾರ ಸಮುದಾಯದ ಇಬ್ಬರು ಯುವತಿಯರಾದ ಶ್ಯಾಮಮ್ಮ ಹುಸೇನಪ್ಪ ಸಿರಿಗಿರಿ (19), ಸಾಯಮ್ಮ ಭೀಮಪ್ಪ ಅಗಸ್ತ (15) ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಮನೆಯಿಂದ ಚಿಂದಿ ಆಯಲು ಹೋಗಿ ಫೆಬ್ರುವರಿ 12ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇಬ್ಬರ ಶವವು ಸಿಕ್ಕಿರುತ್ತದೆ. ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

ಯುವತಿಯರ ಸಾವು ಅನುಮಾನಕ್ಕೀಡು ಮಾಡಿಕೊಟ್ಟಿದ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿರುವ ಬಗ್ಗೆ ಸಂಶಯವಿದೆ. ಈ ಘಟನೆ ನಂತರ ಕೆಲವು ಅಪರಿಚಿತ ವ್ಯಕ್ತಿಗಳು ಇಂದಿರಾ ನಗರದ ಗುಡಿಸಲಿಗಳಿಗೆ ಬಂದು ನೀವೇನಾದರೂ ಕೇಸ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು, ಜೀವ ಬೆದರಿಕೆ ಹಾಕಿದ್ದು, ಕುಟುಂಬದವರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಹೀಗಾಗಿ ತನಿಖೆ ನಡೆಸಬೇಕು ಮತ್ತು ಅವರಿಗೆ ಕೊಡಲೇ ಪೊಲೀಸ್ ಬಂದಬಸ್ತ್ ಮಾಡಿಕೊಡಬೇಕೆಂದು ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ

ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಗಳಿಗೆ ನ್ಯಾಯಾ ಒದಗಿಸಿ ಕೊಡಬೇಕು ಪೊಲೀಸ್ ವರಿಷ್ಠ ಅಧಿಕಾರಿಗಳು ಹಾಗೂ ಜಿಲ್ಲಾ ಅಡಳಿತ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಎಂ ಆರ್ ಪಿ ಎಸ್ ತಾಲೂಕು ಅಧ್ಯಕ್ಷ ರವಿ ಬುರನೋಳ ಎಂಆರ್‌ಪಿಎಸ್ ಗೌವರ ಅಧ್ಯಕ್ಷ ವೆಂಟೇಶ್ ಕರ್ರೆ ನರಸಪ್ಪ ಇಮಲಪುರು. ಅನಿಲ್ ಬಸಪೋಳ ಅಶೋಕ್Dss ಅಧ್ಯಕ್ಷ ಇನ್ನು MRPS ಪದಾಧಿಕಾರಿಗಳು ಮತ್ತು ತೆಲಂಗಾಣ ರಾಜ್ಯದ mrps ಪದಾಧಿಕಾರಿಗಳು ಭಾಗಿಯಾಗಿದ್ದರು

WhatsApp Group Join Now
Telegram Group Join Now
Share This Article
error: Content is protected !!