ಚೇಳೂರು :ತಾಲ್ಲೂಕಿನಲ್ಲಿ ಇಂದು ನ್ಯೂ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಿಶೋರ್ ಸಂಯುಕ್ತ ಪ್ರೌಢಶಾಲೆಯಲ್ಲಿ ಪ್ರೇರಣೆ ಮತ್ತು ಸಾಂಸ್ಕೃತಿಕ ವಾರ್ಷಿಕೋತ್ಸವ ಹಬ್ಬವನ್ನು ವಿಜೃಂಭಣೆ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಿ ಜ್ಯೋತಿ ಬೆಳೆಗಿಸಿ ಗಣ್ಯರಿಂದ ಉದ್ಘಾಟನೆ ಮಾಡಲಾಯಿತು ನಂತರ ಸಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು, ಗಣ್ಯರಿಗೆ ಬಹುಮಾನಗಳನ್ನು ಕೊಟ್ಟು ಸನ್ಮಾನಿಸಲಾಯಿತು,ಇಂದು ಸುಖ-ಸಂತೋಷದಿಂದ ಖುಷಿ-ಖುಷಿಯಾಗಿ ವಿದ್ಯಾರ್ಥಿಗಳು ನೃತ್ಯ ಗಳನ್ನು ಹಾಗೂ ಮಿಮಿಕ್ರಿ ಇನ್ನು ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿ ಬಿ ಜಯರಾಮರೆಡ್ಡಿ, ಕಾರ್ಯದರ್ಶಿ ಕಿಶೋರ್ ವಿದ್ಯಾವರ್ಧಕ,ಪಿ ಆರ್ ಜನಾರ್ಧನ್ ಸರ್ಕಲ್ ಇನ್ಸ್ಪೆಕ್ಟರ್, ಪಿ ಡಿ ಓ ವೆಂಕಟಾಚಲಪತಿ, ಬಾಲಾಜಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚೇಳೂರು, ಮಂಜುನಾಥ್ ಶಿಕ್ಷಣ ಸಂಯೋಜಕರು ಬಾಗೇಪಲ್ಲಿ, ಮುಕುಂದ, ನಾಗರಾಜ್, ಅಶೋಕ್, ಹಾಗೂ ಆಕ್ಸ್ಫರ್ಡ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ವಾಹನ ಸವರಾರು ಹಾಜರಿದ್ದರು.
ವರದಿ :ಯಾರಬ್. ಎಂ.