Ad imageAd image

ಸಿಂಧನೂರು ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲಿಸಿ! ನಾಗರಾಜ ಪೂಜಾರಿ ಆಗ್ರಹ!

Bharath Vaibhav
ಸಿಂಧನೂರು ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲಿಸಿ!  ನಾಗರಾಜ ಪೂಜಾರಿ ಆಗ್ರಹ!
WhatsApp Group Join Now
Telegram Group Join Now

ರಾಯಚೂರು :  ಸಿಂಧನೂರು ನಗರದಲ್ಲಿ ರಸ್ತೆ ಬದಿಗಳಲ್ಲಿ ಡಬ್ಬ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಸಾವಿರಾರು ವ್ಯಾಪಾರಸ್ಥರ ಕುಟುಂಬಗಳು ನಿರಾಶ್ರಿತರಾಗಿದ್ದು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ರಾಯಚೂರು ಡಿಸಿ ಕಚೇರಿ ಮುಂದೆ “ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಘಟಕ ಗುರುವಾರ ೨೦೦ ಕ್ಕೂ ಹೆಚ್ಚು ನಿರಾಶ್ರಿತದೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಕಳೆದ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು ತಾಲೂಕ ಆಡಳಿತ ನಗರಸಭೆ ಏಕಾಏಕಿ ಜೆಸಿಬಿಯಿಂದ ಕಾರ್ಯಚರಣೆ ನಡೆಸಿ ಬೀದಿ ಬದಿಯ ಡಬ್ಬ ಅಂಗಡಿಗಳನ್ನು ತೆರವುಗೊಳಿಸಿ ಸುಮಾರು ಮೂರು ತಿಂಗಳ ಕಳೆದಿದೆ ಇನ್ನುವರೆಗೂ ಬೀದಿ ಬದಿ ವ್ಯಾಪಾರಿಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡದ ಹಿನ್ನೆಲೆ ದೈನಂದಿನ ಜೀವನ ನಡೆಸಲು ಕಷ್ಟಕರವಾಗಿದೆ.


ಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಆದರೆ ಪ್ರಭಾವಿಗಳ ಕಟ್ಟಡಗಳು ಮಳಿಗೆಗಳು ಇಲ್ಲಿಯವರೆಗೂ ಯಾಕೆ? ತೆರವುಗೊಳಿಸಿವುದಿಲ್ಲ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ ದುಡಿಮೆ ಇಲ್ಲದೆ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಕುಟುಂಬಗಳು ಬೀದಿಪಾಲಾಗಿವೆ ಸರ್ಕಾರ ಬಡವರ ಹೊಟ್ಟಿ ಮೇಲೆ ಹೊಡೆಯದೆ ಈ ಕೂಡಲೇ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಮಾನ್ಯಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ, ನಾಗರಾಜ್ ಪೂಜಾರಿ, ಲೇಖಾ ಅಡವಿ, ಕಾಸಿಂಸಾಬ್ ಕಾರ್ಪೆಂಟರ್, ಅಜೀಜ್ ಜಾಗೀರ್ದಾರ್, ರವಿಚಂದ್ರ, ಸಾದಿಕ್ ಹುಸೇನ್, ಲಾಲ್ ಸಾಬ್, ರಸೂಲ್ ಸಾಬ್, ರಹಿಮಾನ್ ಸಾಬ್, ಮೈಬೂಬೂಬ್, ಸಾಧಿಕ್ ಮೆಕಾನಿಕ್, ವೆಂಕೋಬ, ಹುಸೇನ್, ಇದ್ದರು

ಬಸವರಾಜ ಬುಕ್ಕನಹಟ್ಟಿ,

WhatsApp Group Join Now
Telegram Group Join Now
Share This Article
error: Content is protected !!