ಕಲಾದಗಿ : ನಾಳೆ ಬೆಳಿಗ್ಗೆ 10:00 ಗಂಟೆಗೆ 2000 - 01ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಎಸ್. ವಿ.ಲಮಾಣಿ ಮುಖ್ಯ ಗುರುಗಳು ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಕಲಾದಗಿ, ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸುತ್ತಿರುವ ಶ್ರೀಮತಿ ವೀಣಾ ಚಂದಾವರ್ಕರ ನಿವೃತ್ತ ಉಪಕುಲಪತಿ ಮಹಿಳಾ ವಿವಿ ವಿಜಯಪುರ, ಮತ್ತೆ ಅತಿಥಿ ರವಿ ಕಂಗಳ ಶಿಕ್ಷಕರು ಹಾಗೂ ಸಾಹಿತಿಗಳು ಕೆರೂರ.
ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ, ಅನುಗುಣವಾಗಿ ಗೌರವಾನ್ವಿತ ಹಾಗೂ ಸನ್ಮಾನಿತ ಗುರುಗಳು ಎಸ್. ಎನ್. ಹೂಗಾರ ನಿವೃತ್ತ ಶಿಕ್ಷಕರು, ಎಫ್.ವಿ. ಶಿರೋಳಕರ ನಿವೃತ್ತ ಶಿಕ್ಷಕರು, ಎಂ ಬಿ ಹೂಗಾರ ನಿವೃತ್ತ ಶಿಕ್ಷಕರು, ಎಸ್ ವಿ ಬೆಣ್ಣೂರ ನಿವೃತ್ತ ಶಿಕ್ಷಕರು, ಎಲ್ ಆರ್ ಗುದಗನ್ನವರ ಶಿಕ್ಷೆ ಕೀರು, ಎಸ್. ಬಿ. ಹೊಸಮಠ ನಿವೃತ್ತ ಶಿಕ್ಷಕಿಯರು, ಬಿ. ಎ. ಭಾಗವಾನ ನಿವೃತ್ತ ಶಿಕ್ಷಕರು, ಎಮ್ ಆರ್ ಘಾತೆ ಶಿಕ್ಷಕರು ಎಚ್ ಎನ್ ನಾಯನೇಗಲಿ ಶಿಕ್ಷಕರು, ಎಸ್ ಎಮ್ ಸುಳಿಕೇರಿ, ವಿರುಪಾಕ್ಷಿ ಅಂಗಡಿ. 
ಈ ಕಾರ್ಯಕ್ರಮ ಮುಖ್ಯ ವಿಶೇಷವೇನೆಂದರೆ ಮೊದಲು ಕಲಿಸಿದ ಶಿಕ್ಷಕರು ಹಾಗೂ ಅಕ್ಷರದ ಬಗ್ಗೆ ತಿಳಿಸಿಕೊಟ್ಟ ಶಿಕ್ಷಣ ಎಂದರೆ ಪ್ರಾಥಮಿಕ ಶಾಲೆಯ ಗುರುಗಳು ಅವರಿಗೋಸ್ಕರ ಮೊದಲ ಆದ್ಯತೆ ಪ್ರಾಥಮಿಕ ಶಾಲೆಯ ಗುರುಗಳು. 2000 - 01ನೇ ಸಾಲಿನ ವಿದ್ಯಾರ್ಥಿಗಳು ಅವರಿಗೂ ಕೂಡ ಕಾರ್ಯಕ್ರಮಕ್ಕೆ ಗೌರವಾನ್ವಿತ ಹಾಗೂ ಸನ್ಮಾನಿತರು ಗುರುಗಳು ಎಮ್ ಎಸ್ ಮೂರಮಟ್ಟಿ, ಎಸ್ ಬಿ ಮುಳ್ಳೂರ, ಕೆ ಜಿ ಗುಲಗಂಜಿ, ಎಸ್ ಬಿ ಕಟಗಿ, ಸಿ ಎಸ್ ಇನಾಮದಾರ, ಎ ಬಿ ಬಾಗೇವಾಡಿ, ಎಸ್ ಎನ್ ಶೇಬನ್ನವರ, ಎಸ್ ಎಫ್ ಸಿದ್ನಾಳ, ಆಯ್ ಎಸ್ ಹಳ್ಳಿ, ಎಮ್ ಎನ್ ನಿಲನಾಯಕ, ವಾಯ್ ಎಲ್ ತಿಗಳಪ್ಪನವರ, ರತ್ನ ಪರಚನ್ನವರ, ಎಮ್ ಬಿ ಅಂಬಲಿ, ಎ ಎಚ್ ಭಾಗವನ.
ಈ ಕಾರ್ಯಕ್ರಮಕ್ಕೆ ಎಲ್ಲಾ ಗುರುಗಳು ಆಗಮಿಸುತ್ತಾರೆ ಎಂದು 2000 - 01ನೇ ಸಾಲಿನ ವಿದ್ಯಾರ್ಥಿಗಳು ತಿಳಿಸಿದರು.
ವರದಿ : ಬಸವರಾಜ ಪೂಜಾರಿ


