ಹುನಗುಂದ : ತಾಲ್ಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮೃತ್ ಸರೋವರ ಕೆರೆಗಳ ದಡದಲ್ಲಿ ಧ್ವಜಾರೋಹಣವನ್ನು ಕೈಗೊಳ್ಳಲಾಯಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ ಹಾಗೂ ಮಾಜಿ ಸೈನಿಕರ ಅಮೃತ್ ಹಸ್ತದಿಂದ ದೇವಿ ಕೇರೆ ಹಾಗೂ ಊರ ಮುಂದಿನ ಅಮೃತ್ ಸರೋವರ ಕೆರೆಯ ದಡದಲ್ಲಿ ಧ್ವಜಾರೋಹಣ ನೆರವೆರಿಸಿದರು.

ಬಳಿಕ ಗ್ರಾಮ ಪಂಚಾಯತಿ ಮುಂದೆ ಹಾಗೂ ಗ್ರಂಥಾಲಯ ಮುಂದೆ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುಣಶ್ಯಾಳ ಬಿಲ್ ಕಲೆಕ್ಟರ್ ವಾಯ್ ಎಚ್ ಕೋರಿ, ಮಲ್ಲಿಕಾರ್ಜುನ ಮ್ಯಾಗೇರಿ, ಬಿಎಫ್ ಟಿ ರಾಜು ವಾಲಿಕಾರ, ಮಾಜಿ ಸೈನಿಕರು, ಶಾಲಾ ಶಿಕ್ಷಕರು, ಎನ್ ಸಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


