Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತಿಯಾದ ಸಂಶಯದಿಂದ ಹೆಂಡತಿಯನ್ನ ಬರ್ಬರವಾಗಿ ಹತ್ಯೆಗೈದ ಗಂಡ

Advertisement

ಅಥಣಿ: ಹೆಂಡತಿಯ ಮೇಲಿನ ಅತಿಯಾದ ಸಂಶಯ ಮತ್ತು ಕೌಟುಂಬಿಕ ಕಲಹ ಕೊಲೆಯಲ್ಲಿ(Murder) ಅಂತ್ಯವಾಗಿರುವ ಭೀಕರ ಘಟನೆಯೊಂದು ಅಥಣಿ(Athani) ತಾಲೂಕಿನ ಕಟಗೇರಿ(Katageri) ಗ್ರಾಮದಲ್ಲಿ ನಡೆದಿದೆ. ಪತ್ನಿ ಗಾಢ ನಿದ್ರೆಯಲ್ಲಿದ್ದಾಗ ಗಂಡನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಶೋಭಾ ಪರಗೊಂಡ ಸಾರವಾಡ ಕೊಲೆಯಾದ ದುರ್ದೈವಿ. ಪತ್ನಿಯನ್ನೇ ಕಟುಕನಂತೆ ಕೊಂದ ಆರೋಪಿ ಪತಿ ಪರಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಠದಲ್ಲೇ ಇದ್ದು ಕೆಲಸ ಮಾಡುತ್ತಿದ್ದ ದಂಪತಿ

ಮೃತ ಶೋಭಾ ಹಾಗೂ ಆರೋಪಿ ಪರಗೊಂಡ ಮೂಲತಃ ಅಥಣಿ ತಾಲೂಕಿನ ಖವಟಖೊಪ್ಪ ಗ್ರಾಮದ ನಿವಾಸಿಗಳಾಗಿದ್ದಾರೆ. 

ಕಳೆದ ಕೆಲವು ಸಮಯದಿಂದ ಇವರು ಉದ್ಯೋಗ ನಿಮಿತ್ತ ಅವಜೀಕರ ಮಠದಲ್ಲಿ ವಾಸವಿದ್ದರು. ಶೋಭಾ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ, ಪತಿ ಪರಗೊಂಡ ಅದೇ ಮಠದಲ್ಲಿ ಚಾಲಕನಾಗಿ (ಡ್ರೈವರ್) ಕೆಲಸ ನಿರ್ವಹಿಸುತ್ತಿದ್ದನು.

ಸಂಶಯವೇ ಹೆಂಡತಿಯ ಜೀವಕ್ಕೆ ಕಂಟಕವಾಯ್ತು!

ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ಜೋರಾಗಿತ್ತು. ಹೆಂಡತಿಯ ನಡತೆಯ ಬಗ್ಗೆ ಪರಗೊಂಡ ತೀವ್ರವಾಗಿ ಅನುಮಾನ ಪಡುತ್ತಿದ್ದನು. ಇದೇ ವಿಚಾರವಾಗಿ ದಂಪತಿಗಳ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

 ಇದೇ ಸಂಶಯದ ಭರದಲ್ಲಿ, ಶೋಭಾ ಮಲಗಿದ್ದ ವೇಳೆ ಆರೋಪಿ ಪರಗೊಂಡ ಮಾರಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿ ಆಕೆಯನ್ನು ಕೊಂದೇ ಹಾಕಿದ್ದಾನೆ. ಈ ಭೀಕರ ಘಟನೆ ಕಟಗೇರಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ಗ್ರಾಮದಲ್ಲಿ ಆತಂಕ

ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಕಟಗೇರಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ಪರಗೊಂಡನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2028ಕ್ಕೆ ಕರ್ನಾಟಕದಲ್ಲಿ, 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ : ಸಿಎಂ ಸೆಶೆಲ್ಸ್ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ ವಿವಾಹಿತ ಪುತ್ರಿಯರಿಗೂ ಅನುಕಂಪದ ನೌಕರಿ ಹಕ್ಕಿದೆ : ಹೈಕೋರ್ಟ್ ತೀರ್ಪುಅತಿಯಾದ ಸಂಶಯದಿಂದ ಹೆಂಡತಿಯನ್ನ ಬರ್ಬರವಾಗಿ ಹತ್ಯೆಗೈದ ಗಂಡ194 ವರ್ಷದ ಹಿರಿಯ ಭೂ ಪ್ರಾಣಿ ಜೋನಾಥನ್ ಆಮೆ ವಿಕ್ಷಿಸಿದ ಮೋದಿ ಕರಾಚಿ ರೇಂಜರ್ಸ್ ಪ್ರಧಾನ ಕಚೇರಿಯಲ್ಲಿ ಗುಂಡಿನ ಚಕಮಕಿ :4 ಸೈನಿಕರು, 6 ಭಯೋತ್ಪಾದಕರು ಸಾವು ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ವಿಂಡೀಸ್ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನ ಬರ್ಬರ ಕೊಲೆಮೊಹರಂ ಹಬ್ಬದ ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಯುವಕ ದುರ್ಮರಣ : ವಿಡಿಯೋ ವೈರಲ್ ಗ್ರಾಹಕರಿಗೆ ಹೊರೆಯಾಗದಂತೆ ಬಸ್ ದರ ಏರಿಕೆ : ಬೈರತಿ ಸುರೇಶ್