Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಾಹಿತ ಪುತ್ರಿಯರಿಗೂ ಅನುಕಂಪದ ನೌಕರಿ ಹಕ್ಕಿದೆ : ಹೈಕೋರ್ಟ್ ತೀರ್ಪು

Advertisement

ಬೆಂಗಳೂರು: ಮೃತ ಸರ್ಕಾರಿ ನೌಕರರನ್ನು ನಂಬಿಕೊಂಡಿದ್ದ ವಿವಾಹಿತ ಪುತ್ರಿಯರಿಗೂ ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೃತ ನೌಕರರೊಂದಿಗೆ ವಾಸಿಸುತ್ತಾ, ಅವರನ್ನೇ ಅವಲಂಬಿಸಿದ್ದರೆ ಅಂತಹ ವಿವಾಹಿತ ಹೆಣ್ಣುಮಕ್ಕಳಿಗೆ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚಿತ್ರದುರ್ಗದ ಜೋಗಿಮಟ್ಟಿ ನಿವಾಸಿ ಆರ್. ಸವಿತಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜೆ. ಪಂಡಿತ್ ಹಾಗೂ ಕೆ. ರಾಜೇಶ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಈ ಮೂಲಕ ಈ ಹಿಂದೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಕರ್ನಾಟಕ ನಾಗರೀಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ತಿದ್ದುಪಡಿಯ ಪ್ರಕಾರ, 'ಕುಟುಂಬ' ಮತ್ತು 'ಅವಲಂಬಿತರು' ಎಂಬ ಪದಗಳ ವ್ಯಾಖ್ಯಾನ ವಿಶಾಲವಾಗಿದೆ.

ಮೃತ ಸರ್ಕಾರಿ ನೌಕರನನ್ನೇ ನಂಬಿಕೊಂಡಿರುವ ಹೆಣ್ಣುಮಗಳು ಅವಿವಾಹಿತಳಾಗಿರಲಿ, ವಿವಾಹಿತಳಾಗಿರಲಿ, ವಿಚ್ಛೇದಿತಳಾಗಿರಲಿ ಅಥವಾ ವಿಧವೆಯಾಗಿರಲಿ, ಅವರೆಲ್ಲರೂ ಅನುಕಂಪದ ನೌಕರಿಗೆ ಅರ್ಹರಾಗುತ್ತಾರೆ. 

ಈ ನಿಯಮವು ಮೊದಲಿನಿಂದಲೂ ಅನ್ವಯವಾಗಲಿದ್ದು, ಕೇವಲ 'ಮದುವೆಯಾಗಿದೆ' ಎಂಬ ಒಂದೇ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲು ಬರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ತಾಯಿ ನಿವೃತ್ತ ಸರ್ಕಾರಿ ನೌಕರರಾಗಿದ್ದು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣವನ್ನು ನೀಡಿ ಇಲಾಖೆಯು ಉದ್ಯೋಗ ನೀಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. 

ವಿವಾಹಿತ ಪುತ್ರಿಯು ಇತರೆ ಎಲ್ಲಾ ಕಾನೂನಾತ್ಮಕ ಅರ್ಹತೆಗಳನ್ನು ಹೊಂದಿದ್ದರೆ, ಆಕೆಯನ್ನು ಅನುಕಂಪದ ನೇಮಕಾತಿಗೆ ಪರಿಗಣಿಸಲೇಬೇಕು ಎಂದು ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ನ್ಯಾಯಾಲಯವು ಖಡಕ್ ನಿರ್ದೇಶನ ನೀಡಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2028ಕ್ಕೆ ಕರ್ನಾಟಕದಲ್ಲಿ, 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ : ಸಿಎಂ ಸೆಶೆಲ್ಸ್ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಮೋದಿ ವಿವಾಹಿತ ಪುತ್ರಿಯರಿಗೂ ಅನುಕಂಪದ ನೌಕರಿ ಹಕ್ಕಿದೆ : ಹೈಕೋರ್ಟ್ ತೀರ್ಪುಅತಿಯಾದ ಸಂಶಯದಿಂದ ಹೆಂಡತಿಯನ್ನ ಬರ್ಬರವಾಗಿ ಹತ್ಯೆಗೈದ ಗಂಡ194 ವರ್ಷದ ಹಿರಿಯ ಭೂ ಪ್ರಾಣಿ ಜೋನಾಥನ್ ಆಮೆ ವಿಕ್ಷಿಸಿದ ಮೋದಿ ಕರಾಚಿ ರೇಂಜರ್ಸ್ ಪ್ರಧಾನ ಕಚೇರಿಯಲ್ಲಿ ಗುಂಡಿನ ಚಕಮಕಿ :4 ಸೈನಿಕರು, 6 ಭಯೋತ್ಪಾದಕರು ಸಾವು ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ವಿಂಡೀಸ್ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನ ಬರ್ಬರ ಕೊಲೆಮೊಹರಂ ಹಬ್ಬದ ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಯುವಕ ದುರ್ಮರಣ : ವಿಡಿಯೋ ವೈರಲ್ ಗ್ರಾಹಕರಿಗೆ ಹೊರೆಯಾಗದಂತೆ ಬಸ್ ದರ ಏರಿಕೆ : ಬೈರತಿ ಸುರೇಶ್