ಬೆಂಗಳೂರು: ಬೆಂಗಳೂರ ಹಯೋಗದಲ್ಲಿ ರಾಜ್ಯಮಟ್ಟದ ಸಾಮಾನ್ಯ ಸಭೆಯು ಗದಗ ಜಿಲ್ಲೆಯ ಮುಕ್ಕಣ್ಣೇ ಅವರ ಸಭಾ ಭವನದಲ್ಲಿ ಸಾಮಾನ್ಯ ಸಭೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಹೂಗಾರ್ ಸಮಾಜದ ಮುಖಂಡರು ಮಹಿಳೆಯರು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ಮಾಡಲಾಯಿತು.
ನಂತರ ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ್ ಮಾತನಾಡಿ ರಾಜ್ಯದ ಈ ಸಮಾಜಕ್ಕೆ ಅಭಿವೃದ್ಧಿ ಗೋಸ್ಕರ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿ ಹಣ ಬಿಡುಗಡೆಗೊಳಿಸಿ ಈ ಸಮಾಜವನ್ನು ಉತ್ತಮ ಗೊಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಸಭೆಯನ್ನು ಉದ್ದೇಶಿಸಿ ಬಸವರಾಜ್ ಹೂಗಾರ್ ಮಾತನಾಡಿದರು.
ಇದೆ ವೇಳೆ ಗದಗ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು. 
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾ ಸಭಾ ಬೆಂಗಳೂರ ರಾಜ್ಯ ಗೌರವಾಧ್ಯಕ್ಷ ಗುರುರಾಜೇಂದ್ರ ಶಿವಯೋಗಿಗಳು, ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ರಾಯಚೂರ ಮತ್ತು ರಾಜ್ಯದ ಮಹಿಳಾ ಅಧ್ಯಕ್ಷೆ ಭಾರತಿ ಬುಯಾರ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾ ಅಧ್ಯಕ್ಷರು ಪ್ರಕಾಶ ಫೂಲಾರಿ,ಭೀಮಣ್ಣ, ನರಸಣ್ಣ , ಮಡಿವಾಳ, ಈರಣ್ಣ , ಬಸವರಾಜ, ಮಹಾಂತೇಶ , ಶಾಂತಪ್ಪ, ಅಂಬರೀಶ್ ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್


