ಕೊಲಂಬೋ: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮಾನ್ ಗಿಲ್ ಶ್ರೀಲಂಕಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ತಾತ್ಕಾಲಿಕವಾಗಿ ನಾಯಕನ ಜವಾಬ್ದಾರಿ ಕೆ.ಎಲ್. ರಾಹುಲ್ ಅವರಿಗೆ ನೀಡಿದ್ದರೂ ಪಂದ್ಯದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.
ಶ್ರೀಲಂಕಾ ಇಲೆವೆನ್ ವಿರುದ್ಧ ನಡೆದಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲನೇ ದಿನ ಬೆರಳಿನ ಗಾಯದ ಕಾರಣ ಗಿಲ್ ಮೈದಾನಕ್ಕೆ ಇಳಿದಿರಲಿಲ್ಲ. ಕೆ.ಎಲ್. ರಾಹುಲ್ ನಾಯಕನ ಪಾತ್ರ ವಹಿಸಿದ್ದರು.
ಭಾರತದ ಬ್ಯಾಟಿಂಗ್ ಅನ್ನು ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಆರಂಭಿಸಿದ್ದರು. ಮೂರನೇ ಕ್ರಮಾಂಕದಲ್ಲಿ ದೇವದತ್ತ ಪಡಿಕಲ್ ಆಡಲು ಬಂದಿದ್ದರು. ನಾಲ್ಕನೇ ಕ್ರಮಾಂಕದಲ್ಲೂ ಗಿಲ್ ಆಡಲು ಬಂದಿರಲಿಲ್ಲ. ಆದರೆ ತಂಡದಲ್ಲಿರುವ ಗಿಲ್ ಯಾವುದೇ ಕ್ರಮಾಂಕದಲ್ಲಿ ಆಡಲು ಇಳಿಯುವ ಸಾಧ್ಯತೆ ಇದೆ. ಅಥವಾ ಇಳಿಯದಿರಬಹುದು. ಆಗಷ್ಟ್ ೧೫ ರಂದು ಆರಂಭವಾಗುವ ಗಾಲೆ ಟೆಸ್ಟ್ಗೂ ಮುನ್ನ ನಾಯಕ ಶುಭಮಾನ್ ಗಿಲ್ ಫಿಟ್ನೇಶ್ ಮರಳಿ ಪಡೆಯುವ ಅಗತ್ಯ ಇದೆ.


