ಸಿಂಧನೂರು : ಗಾಂಜಾ ಸಾಗಾಣಿಕೆ ಮಾಡುತ್ತಿರುವ ಇಬ್ಬರು ಆರೋಪಿತರ ಬಂಧನ, ಅಂದಾಜು 20 ಲಕ್ಷದ ಮೌಲ್ಯದ 20.74 ಕೆ.ಜಿ ಗಾಂಜಾ ಮತ್ತು ಮೋಟಾರ ಸೈಕಲ್ ಜಪ್ತಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಸೇವನೆ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿದ್ದುದರಿಂದ ಗಾಂಜಾ ಪೆಡ್ಲರ್ಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಮಾನ್ಯ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಸೂಚಿಸಿದ ಮೇರೆಗೆ ಅರುಣಾಂಗ್ಲು ಗಿರಿ ಐ.ಪಿ.ಎಸ್, ಎಸ್.ಪಿ ರಾಯಚೂರು, ಹರೀಶ. ಜಿ. ಮಾನ್ಯ ಹೆಚ್ಚುವರಿ ಎಸ್.ಪಿ, ರಾಯಚೂರು ಚಂದ್ರಶೇಖರ.ಜಿ. ಡಿಎಸ್ಪಿ ಸಿಂಧನೂರು, ವಿನಾಯಕ ಸಿಪಿಐ ಸಿಂಧನೂರು ಗ್ರಾಮೀಣ ವೃತ್ತ, ವೀರಾರೆಡ್ಡಿ ಪಿಐ, ಸಿಂಧನೂರು ನಗರ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಎರಿಯಪ್ಪ ಪಿಎಸ್ಐ (ಕಾ&ಸು) ಬಳಗಾನೂರು ಪೊಲೀಸ್ ಠಾಣೆ ರವರು ಮೌನೇಶ ಯು, ರಾಠೋಡ್ ಪಿಎಸ್ಐ ಸಿಂಧನೂರು ಗ್ರಾಮೀಣ ಠಾಣೆ, ಶ್ರೀಮತಿ ಸುಜಾತ ಪಿಎಸ್ಐ ತುರುವಿಹಾಳ ಪೊಲೀಸ್ ಠಾಣೆ ಹಾಗೂ ಅಧಿಕಾರಿ & ಸಿಬ್ಬಂದಿಯವರಾದ ಸಿದ್ದಪ್ಪ ಎಎಸ್ಐ, ರವಿ ಹೆಚ್ಸಿ, ದೇವಪ್ಪ ಹೆಚ್ಸಿ, ವೆಂಕಟೇಶ ಹೆಚ್ಸಿ, ರೇವಣಸಿದ್ದಪ್ಪ ಹೆಚ್ಸಿ, ಸಂಗಯ್ಯ ಹೆಚ್ಸಿ, ರಮೇಶ ಪಿಸಿ, ನಾಗರಾಜ ಪಿಸಿ, ಗೋಪಾಲ ಪಿಸಿ, ರಾಮಪ್ಪ ಪಿಸಿ, ಪ್ರಕಾಶ ಪಿಸಿ, ಮಲ್ಲನಗೌಡ ಎಪಿಸಿ (ಸಿಡಿಆರ್ ವಿಭಾಗ) ಎಲ್ಲರೂ ಬಳಗಾನೂರು ಠಾಣೆರವರು ಇಂದು ದಿನಾಂಕ: ದಿನಾಂಕ:06-07-2026 ರಂದು 2 ಜನ ಆರೋಪಿತರನ್ನು ಪತ್ತೆ ಮಾಡಿ ಹಿಡಿದು ಅವರಿಂದ ಒಟ್ಟು 20.074 ಕೆ.ಜಿ ಅಂದಾಜು ಕಿಮ್ಮತ್ತು ರೂ. 20,07,400/- ಬೆಲೆಬಾಳುವ ಒಣ ಗಾಂಜಾ ಹಾಗೂ ಹೋಂಡಾ ಗ್ರೀಮ್ ಯುಗ್ ಮೋಟಾರ ಸೈಕಲ್ ನಂ:KA-36/EC-1445 ನೇದ್ದನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಈ ಆರೋಪಿತರ ವಿರುದ್ಧ ಬಳಗಾನೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆದಿರುತ್ತದೆ. ದಸ್ತಗಿರಿ ಮಾಡಿದ ಆರೋಪಿತರ ವಿವರ
ಎ-1 ದೀನಬಂಧು ಮಂಡಲ್ ತಂದೆ ಧೀರೇಂದ್ರ ಮಂಡಲ್,ಎ 53 ವರ್ಷ, ಕ್ಷತ್ರಿಯಾ, ಸೆಂಟ್ರಿಂಗ್ ಕೆಲಸ, ಸಾ:ಆರ್ ಹೆಚ್ ಕ್ಯಾಂಪ್ ನಂ:02 ತಾ:ಸಿಂಧನೂರು -2 ಶಂಭು ಸರ್ದಾರ್ ತಂದೆ ಕೃಷ್ಣ ಸರ್ದಾರ್,31 ವರ್ಷ, ಕ್ಷತ್ರಿಯಾ, ಕೋಳಿ ವ್ಯಾಪಾರ, ಸಾ:ಬಸವರಾಜೇಶ್ವರಿ ಕ್ಯಾಂಪ್ ತಾ:ಸಿಂಧನೂರು ಎಂದು ಹೇಳಲಾಗಿದೆ
ವರದಿ : ಬಸವರಾಜ ಬುಕ್ಕನಹಟ್ಟಿ


