ಸಿಂಧನೂರು : ಯಾವುದೇ ಸಂಘ ಸಂಸ್ಥೆ ಹಾಗೂ ಸಮಾಜದ ಸಂಘಟನೆಗಳು ತನ್ನದೆಯಾದ ಬೈಲಾವನ್ನು ಒಳಗೊಂಡಿರುತ್ತವೆ. ಬೈಲಾ ನಿಯಮಾವಳಿ ಪ್ರಕಾರ ಯಾವುದೇ ಸಮಾಜದ ಸಮಿತಿ ರಚನೆ ಹಾಗೂ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದರೆ ಸಮಾಜದ ಮುಖಂಡರೆಲ್ಲ ಸೇರಿ ಒಮ್ಮತದಿಂದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿರುತ್ತದೆ ಆದರೆ ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ್ ಜಾನಕಲ್ ಅವರು ನನ್ನನ್ನು ಛಲವಾದಿ ಮಹಾಸಭಾ ಸಂಘಟನೆಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಹೇಳಿದ್ದಾರೆ ಇದು ಖಂಡನೆಯ ಎಂದು ಅಧ್ಯಕ್ಷ ವೀರೇಶ್ ಕೆ. ಹಂಚಿನಾಳ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧ್ಯಕ್ಷ ಶಿವರಾಜ್ ಜಾನಕಲ್ ಅವರ ತೀರ್ಮಾನ ಏಕ ಪಕ್ಷ ನಿರ್ಣಯವಾಗಿದ ಇದರಿಂದ ಸಮಾಜದ ಮೇಲೆ ಕೆಟ್ಟ ಸಂದೇಶ ಉಂಟಾಗಿದೆ ಒಟ್ಟಿನಲ್ಲಿ ಶಿವರಾಜ ಜಾನೇಕಲ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆ ಅನ್ಯ ಜಾತೀಯ ಸಮಾಜದವರು ಹಾಡಿಕೊಂಡು ನಗುವಂತಾಗಿದೆ ನನ್ನ ಮೇಲೆ ಮಾಡಿದ ಆರೋಪಕ್ಕೆ ದಾಖಲೆ ಸಮೇತ ಸಾಬೀತುಪಡಿಸಬೇಕು. ನನ್ನನು ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕಾದರೆ ಸಮಾಜದ ಮುಖಂಡರೆಲ್ಲರನ್ನು ಒಳಗೊಂಡ ಸಭೆಯಲ್ಲಿ ನನ್ನ ವಿರುದ್ಧ ಸಮಾಜದ ಮುಖಂಡರು ಅವಿವಿಶ್ವಾವ ನಿರ್ಣಯ ತೆಗೆದುಕೊಂಡಾಗ ನನ್ನನ್ನು ಅಮಾನತು ಮಾಡಿ ಆದ್ರೆ ಸುಖಾಸುಮ್ಮನೆ ತೆಗೆದು ಹಾಕಿದ್ದು ಯಾಕೇ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಸಮಿತಿಗೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಿರಿ. ನೀವು ಸಮಾಜದ ಏಳಿಗೆಗೆ ಶ್ರಮಿಸಲು ಕರೆ ನೀಡಿರುತ್ತೀರಿ. ಅದರಂತೆ ಸಮಾಜದ ಒಳಿತಿಗಾಗಿ ನನ್ನ ಇತಿಮಿತಿಯಲ್ಲಿ ಕೆಲಸ ಮಾಡಿರುತ್ತೇನೆ. ಇತ್ತಿಚೆಗೆ ಮಹನೀಯರ ಜಯಂತಿ ಅಂಗವಾಗಿ ಸಮಾಜದ ಎಲ್ಲ ಹಿರಿಯರ ಸಮ್ಮುಖದಲ್ಲಿ ಹಾಗೂ ಸಮಿತಿಯ ಪದಾಧಿಕಾರಿಗಳ ಒಳಗೊಂಡು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಡಿದ್ದೇನೆ.
ನೀವು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಳ್ಳೆಯ ಕಾರ್ಯಕ್ರಮ ಇದಾಗಿದೆ ಎಂದು ಸಹಬ್ಬಾಸಗಿರಿ ನೀಡಿರುತ್ತೀರಿ ಆದರೆ ಅಧ್ಯಕ್ಷರ ದೀಡಿರ್ ಬದಲಾವಣೆ ಯಾವ ಕಾರಣಕ್ಕೆ ಆದರೆ ಒಂದು ಸಂಘಟನೆಯ ಜಿಲ್ಲಾಧ್ಯಕ್ಷರಾದವರು ಯಾವುದೇ ಅಧ್ಯಕ್ಷ ಸಂಘದ ವಿರುದ್ಧವಾಗಿ ನಡೆದುಕೊಂಡರೆ ಎರಡು ಅಥವಾ ಮೂರು ನೋಟಿಸ್ ಕಳಿಸಬೇಕು. ಆ ನೋಟಿಸ್ ಗೆ ಉತ್ತರಿಸದಿದ್ದಾಗ ವಿರುದ್ಧವಾಗಿ ನಡೆದುಕೊಂಡರೆ ತೆಗೆದು ಹಾಕಲು ಅಧಿಕಾರ ಇರುತ್ತದೆ. ಹಾಗಾಗಿ ಇನ್ನೋಮ್ಮೆ ಸಭೆ ಕರೆದು ಸಮಾಜದ ಮುಖಂಡರು, ಹಿರಿಯರು ಯಾರಿಗೆ ಬಹುಮತ ನೀಡುತ್ತಾರೆಯೋ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಿ ನೀವು ಸುಮ್ಮನಾದರೆ ಯಾರೋ ಒತ್ತಡದ ಮೇರೆಗೆ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸ್ಥಾನದಿಂದ ನನ್ನನ್ನು ಅಮಾನತು ಮಾಡಿರುವುದು ಸಂಘದ ಬೈಲಾ ವಿರುದ್ಧ ಹಾಗೂ ಏಕಪಕ್ಷೀಯ ನಿರ್ಧಾರವಾಗಿದೆ ನಾನು ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಪತ್ರಿಕೆ ಹೇಳಿಕೆ ಮೂಲಕ ತಿಳಿಸಿದ್ದಾರೆ.
ವರದಿ : ಬಸವರಾಜ ಬುಕ್ಕನಹಟ್ಟಿ.

