Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 

Advertisement

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಹೈಕಮಾಂಡ್ ನಾಯಕರು ಇಂದು ಅಥವಾ ನಾಳೆ ಬರುವವರಿದ್ದಾರೆ. ಅವರು ಬಂದ ಬಳಿಕ ನಮ್ಮನ್ನು ಯಾವಾಗ ಭೇಟಿಗೆ ಕರೆಯುತ್ತಾರೋ, ಆಗ ತಾವು ದೆಹಲಿಗೆ ತೆರಳಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ತಲೆದೋರಿರುವ ಮಳೆ ಅಭಾವ ಹಾಗೂ ಶಾಸಕರ ಬೇಡಿಕೆಗಳ ಹಿನ್ನೆಲೆಯಲ್ಲಿ 'ಮೋಡ ಬಿತ್ತನೆ' ನಡೆಸುವ ಕುರಿತು ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮೋಡ ಬಿತ್ತನೆ ಮಾಡುವಂತೆ ಶಾಸಕರೆಲ್ಲರೂ ತೀವ್ರ ಒತ್ತಾಯ ಮಾಡಿದ್ದಾರೆ. 

ಈ ತಾಂತ್ರಿಕ ಪ್ರಕ್ರಿಯೆಯ ಸಾಧಕ-ಬಾಧಕಗಳ ಬಗ್ಗೆ ನಮ್ಮ ಕಾನೂನು ಅಧಿಕಾರಿಗಳು ಹಾಗೂ ಹಣಕಾಸು ಇಲಾಖೆಯೊಂದಿಗೆ ಸೂಕ್ತ ಚರ್ಚೆ ನಡೆಸಬೇಕಾಗಿದೆ.

ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನೇ ಅಪಹರಿಸಿದ ಕಿರಾತಕರು : 4.25 ಲಕ್ಷ ರೂ. ಲೂಟಿ ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ತಹಶೀಲ್ದಾರ್ ಗೆ 4 ವರ್ಷ ಜೈಲು ಶಿಕ್ಷೆ, ತಲಾ 20 ಸಾವಿರ ರೂ. ದಂಡಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು ಪ್ರೊ.ಬಿ.ಕೃಷ್ಣಪ್ಪರ ಜಯಂತೋತ್ಸವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ!ಕೆಸ್ತೂರು ಶಾಲೆಯ ಕಾಂಪೌಂಡ್ ಬಳಿ ಜೋತು ಬಿದ್ದ ವಿದ್ಯುತ್ ತಂತಿ ಪೋಷಕರಲ್ಲಿ ಆತಂಕಶೇ. 60 ಕ್ಕಿಂತ ಕಡಿಮೆ ಮಳೆಯಾಗಿರುವ ಪ್ರದೇಶಗಳಲ್ಲಿ ಬರ ಘೋಷಣೆ : ರಾಜ್ಯ ಸರ್ಕಾರ ಸಿದ್ಧತೆಭಾರತದಲ್ಲಿ ಬಿಡುಗಡೆಯಾಯಿತು ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಇನ್ಸುಲಿನ್ ಇಂಜೆಕ್ಷನ್!ವಿಶ್ವಕಪ್ ಫುಟ್‌ಬಾಲ್: ಫ್ರಾನ್ಸ್ ಸೆಮಿಫೈನಲ್‌ಗೆಇಂದಿನಿಂದ ಮೂರು ದಿನ ಆರ್.ಎಸ್.ಎಸ್. ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ