Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಗತ್ಯ ಬಿದ್ದರೆ ಬೆಳಗಾವಿ ಜಿಲ್ಲೆಗೂ ಮೋಡ ಬಿತ್ತನೆ : ಸತೀಶ್ ಜಾರಕಿಹೊಳಿ

Advertisement

ಬೆಳಗಾವಿ : ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಈಗಾಗಲೇ ಉತ್ತಮ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಮುನಿಸಿಕೊಂಡಿದ್ದ ಮಳೆರಾಯ ಈಗ ತಡವಾಗಿಯಾದರೂ ಅಬ್ಬರಿಸುತ್ತಿರುವುದು ರೈತರಿಗೆ ಆಶಾದಾಯಕವಾಗಿದೆ. ರೈತರ ಹಿತದೃಷ್ಟಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಸಮರ್ಪಕವಾಗಿ ಮಳೆಯಾಗದಿದ್ದರೂ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅಲ್ಲಿಯೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಈ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸುಚ ಭರವಸೆ ಇದೆ.

ರಾಮದುರ್ಗ, ಸವದತ್ತಿ ಭಾಗದಲ್ಲೂ ಮಳೆ ನಿರೀಕ್ಷೆ

ಜಿಲ್ಲೆಯ ರಾಮದುರ್ಗ ಮತ್ತು ಸವದತ್ತಿ ಸೇರಿದಂತೆ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಇನ್ನೂ ಸಮರ್ಪಕವಾಗಿ ಮಳೆಯಾಗಿಲ್ಲ ಎನ್ನುವುದು ನಿಜ. ಆದರೆ, ರೈತರು ಧೃತಿಗೆಡಬೇಕಾಗಿಲ್ಲ, ಏಕೆಂದರೆ ಮುಂದಿನ ಎಂಟು ದಿನಗಳಲ್ಲಿ ಆ ಭಾಗಗಳಲ್ಲೂ ಉತ್ತಮ ಮಳೆಯಾಗುವ ಎಲ್ಲಾ ನಿರೀಕ್ಷೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಆರಂಭಿಸಲಾಗಿದೆ. ಅದೇ ಮಾದರಿಯಲ್ಲಿ ಒಂದು ವೇಳೆ ಬೆಳಗಾವಿ ಜಿಲ್ಲೆಗೂ ಅದರ ಅಗತ್ಯ ಎನಿಸಿದರೆ, ಇಲ್ಲಿಯೂ ಮೋಡ ಬಿತ್ತನೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಗತ್ಯ ಬಿದ್ದರೆ ಬೆಳಗಾವಿ ಜಿಲ್ಲೆಗೂ ಮೋಡ ಬಿತ್ತನೆ : ಸತೀಶ್ ಜಾರಕಿಹೊಳಿಮೊಬೈಲ್‌ ಟಾರ್ಚ್ ಬೆಳಕಿನಲ್ಲಿ ಬಸ್ ಓಡಿಸಿದ ಡ್ರೈವರ್ಬೆಳಗಾವಿ ಡೆಲ್ಟಾ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ : ತಪ್ಪಿಸಿ ಹೋದರೆ ಜೈಲು ಫಿಕ್ಸ್ ಅನಾಥ ಯುವತಿ ಬಾಳಿಗೆ ಬೆಳಕಾದ ಹಾರೂಗೇರಿ ಯುವಕ ಜೈಲಿನಲ್ಲಿದ್ದರೂ ಸಹ ತನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಅವಕಾಶವಿದೆ : ಹೈಕೋರ್ಟ್ ಹೆದರಿಸಿ ಹಣ ವಸೂಲಿ ಮಾಡಿದ್ದರೇ ರೌಡಿಶೀಟ್ ಫಿಕ್ಸ್ : ನಕಲಿ ಯುಟ್ಯೂಬರ್ ಗಳಿಗೆ ಬೆಳಗಾವಿ ಎಸ್ಪಿ ಎಚ್ಚರಿಕೆ ಇಂಗ್ಲೆAಡ್‌ಗೆ ೧೯೧ ರನ್‌ಗಳ ಗೆಲುವಿನ ಗುರಿಬೆಂಗಳೂರು ಮೂಲದ ಗೌರಿ ಜೊತೆ ನಾಳೆ ಅಮೀರ್ ಖಾನ್ ವಿವಾಹ ಜುಲೈ 20 ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಮಹಾರಾಷ್ಟ್ರದಲ್ಲಿ ಮಳೆ : ಕೃಷ್ಣಾ ನದಿಗೆ ಹರಿದು ಬಂತು 15 ಸಾವಿರ ಕ್ಯೂಸೆಕ್ ನೀರು