Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನುಕಂಪದ ನೌಕರಿಗೆ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ : ಸುಪ್ರೀಂ ಕೋರ್ಟ್ 

Advertisement

ನವದೆಹಲಿ: ಸರಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಪ್ರಕ್ರಿಯೆಯಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅನುಕಂಪದ ಆಧಾರದ ನೇಮಕಾತಿ ನಿಯಮಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅನುಕಂಪದ ಉದ್ಯೋಗದ ನಿಯಮಗಳಲ್ಲಿ ಕೇವಲ ಗಂಡುಮಕ್ಕಳು ಮತ್ತು ಅವಿವಾಹಿತ ಪುತ್ರಿಯರನ್ನು ಮಾತ್ರ ಸೇರಿಸಿ, ವಿವಾಹಿತ ಅಥವಾ ವಿಚ್ಛೇದಿತ ಪುತ್ರಿಯರನ್ನು ಹೊರಗಿಡುವುದು ಸಂವಿಧಾನ ವಿರೋಧಿ ಎಂದು ಪೀಠ ಹೇಳಿದೆ.

ಈ ರೀತಿಯ ತಾರತಮ್ಯವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 15 (ಲಿಂಗ, ಜಾತಿ, ಧರ್ಮ ಆಧಾರಿತ ತಾರತಮ್ಯದ ನಿಷೇಧ) ಗಳ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 ಮದುವೆಯಾದ ತಕ್ಷಣ ಮಗಳು ತಂದೆ-ತಾಯಿಯ ಕುಟುಂಬದ ಭಾಗವಾಗಿ ಉಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು. ಅನುಕಂಪದ ನೇಮಕಾತಿ ಯೋಜನೆಯಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎರಡು ವರ್ಷಗಳ ಬಳಿಕ ಭಾರತದಲ್ಲೇ ಸಾರ್ವಜನಿಕವಾಗಿ ಮಾತನಾಡಿಲಿರುವ ಶೇಖ್ ಹಸೀನಾಆಗಸ್ಟ್ ಅಂತ್ಯದ ವೇಳೆಗೆ ಬರಗಾಲ ಪೀಡಿತ ಪ್ರದೇಶಗಳ ಘೋಷಣೆ : ಡಿ. ಕೆ ಶಿವಕುಮಾರ್ ಒಂದೇ ಹಂತದಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪಡಿತರ ವಿತರಣೆ ಅನುಕಂಪದ ನೌಕರಿಗೆ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ : ಸುಪ್ರೀಂ ಕೋರ್ಟ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಗೊಂದಲ ,ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ : ಆರ್. ಅಶೋಕ್ ನಾಳೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ.: ಪ್ರಿಯಾಂಕ್ ಖರ್ಗೆ ಅಮ್ಮನಿಲ್ಲದ ಕಂದನ ಅಳು, ಪೊಲೀಸರ ಮಡಿಲಲ್ಲಿ ಲಾಲಿ : ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಮಾನವೀಯತೆ ಕರ್ನಾಟಕ ಬಂದ್​ ಮಾಡೇ ಮಾಡ್ತೀವಿ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ವಾಟಾಳ್ ನಾಗರಾಜ್ ಕುರೆ ಕುರೆಯೊಳಗಿನ ಸಣ್ಣ ಬಾಲ್ ನುಗ್ಗಿ 5 ವರ್ಷದ ಮಗು ಸಾವು ರಾಜಕೀಯಕ್ಕಿಂತ ರಾಜ್ಯದ ರೈತರ,‌ ಜನರ ಹಿತ ಮುಖ್ಯ : ಡಿ. ಕೆ ಶಿವಕುಮಾರ್