Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯನವರ ಕಣ್ಣಿರಲ್ಲಿ ಕಾಂಗ್ರೆಸ್ ತೊಳೆದುಹೋಗುತ್ತೆ – ಛಲವಾದಿ ನಾರಯಣಸ್ವಾಮಿ

Advertisement


ಭಾಲ್ಕಿ  : ಸಿದ್ರಾಮಯ್ಯನವರ ಕಣ್ಣೀರಲ್ಲಿ ಕಾಂಗ್ರೆಸ್ ಪಕ್ಷ ತೊಳೆದುಕೊಂಡು ಹೋಗುತ್ತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಪಟ್ಟಣದ ಮಾಜಿ ಶಾಸಕ ಪ್ರಕಾಶ ಖಂಡ್ರೆಯವರ ನಿವಾಸದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ಮುಖಂಡ ಸಿದ್ರಾಮಯ್ಯನವರಿಗೆ ಹೇಗೆ ನಡೆಸಿಕೊಳ್ಳಬೇಕು ಎನ್ನುವ ಸಾಮಾನ್ಯ ವಿಷಯ ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಚಿಕ್ಕವಯಸ್ಸಿನ ರಾಹುಲ್ ಗಾಂಧಿ ಹಿರಿಯರಾದ ಸಿದ್ರಾಮಯ್ಯನವರಿಗೆ ಕಾಲಾವಕಾಶ ಕೊಡದೇ, ತಕ್ಷಣವೇ ರಾಜಿನಾಮೆ ಕೊಡು ಎಂದು ಹೇಳಿರುವುದು ನೋವಿನ ಸಂಗತಿಯಾಗಿದೆ. ದಲಿತರ ಮತದಿಂದ ಬೀಗುತ್ತಿರುವ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ದಲಿತರನ್ನು ತುಳಿಯುತ್ತಾ ಬಂದಿದೆ, ದಲಿತರಿಗೆ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಬಾಯಿ ಮಾತಲ್ಲಿ ಹೇಳುವ ಕಾಂಗ್ರೆಸ್ ಖಗ್ರೆಯವರಿಗೆ ಮುಖ್ಯಮಂತ್ರಿ ಮಾಡಲಿ, ಇಲ್ಲವೇ ವಯಸ್ಸಿನ ನೆಪ ಹೇಳಿದರೆ ಕಾಂಗ್ರೆಸ್ ನಲ್ಲಿಯೂ ತುಂಬಾ ದಲಿತ ನಾಯಕರಿದ್ದಾರೆ, ಜಿ. ಪರಮೆಶ್ವರ, ಕೆ. ಹೆಚ್. ಮುನಿಯಪ್ಪ ಸೇರಿದಂತೆ ಉತ್ತಮ ದಲಿತ ನಾಯಕರಿದ್ದಾರೆ ಅವರಿಗಾದರೂ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿ ಎಂದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ. ೨೦೨೮ರ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ, ಡಾ|| ಶೈಲೇಂದ್ರ ಬೆಲ್ದಾಳೆ ಇದ್ದರು.

ವರದಿ : ಸಂತೋಷ ಬಿಜಿ ಪಾಟೀಲ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದಿಸಿ ಬ್ಲ್ಯಾಕ್ ಮೇಲ್ : 120 ಗ್ರಾಂ ಬಂಗಾರ ದೋಚಿದ ಖದೀಮರು ಅರೆಸ್ಟ್ ಕೈಕಾಲು ಹಿಡಿದ ಇತಿಹಾಸ ಆರ್‌ಎಸ್‌ಎಸ್‌ಗೆ ಇದೆ : ಪ್ರಿಯಾಂಕ್ ಖರ್ಗೆ ವಿದ್ಯಾನಿಕೇತನ ಶಾಲೆಯಲ್ಲಿ ಪರಿಸರ ದಿನಾಚರಣೆಉರಿ ಸೆಕ್ಟರ್‌ನಲ್ಲಿ ಗ್ರೆನೇಡ್ ಆಕಸ್ಮಿಕ ಸ್ಫೋಟ : ಇಬ್ಬರು ಯೋಧರು ಸಾವು ರಾಜ್ಯದ ಸಾರಿಗೆ ನಿಗಮಗಳಿಗೆ 5000 ಹೊಸ ಬಸ್ ಗಳನ್ನು ಸೇರ್ಪಡೆ : ಬೈರತಿ ಸುರೇಶ್ ಬಾಗೇಪಲ್ಲಿ  ಚಿತ್ರಾವತಿ ನದಿ ಉಳಿವಿಗಾಗಿ ನಿರಂತರ ಹೋರಾಟ ವಕೀಲ ಎ.ಜಿ.ಸುಧಾಕರ  ಅಧಿಕಾರಿಗಳಿಗೆ ಎಚ್ಚರಿಕೆ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನಕ್ಕಾಗಿ ಅಭಿಮಾನಿ ಯಿಂದ ದೀರ್ಘದಂಡ  ನಮಸ್ಕಾರಪ್ರೊ.ಬಿ.ಕೃಷ್ಣಪ್ಪ ದಲಿತ ಸಮುದಾಯದ ಸಂಘಟನಾ ಚೈತನ್ಯದ ಶಕ್ತಿ : ದೊಡ್ಡಾಘಟ್ಟ ಚಂದ್ರೇಶ್ ಅಭಿಮತಪ್ರಧಾನಿಯಾಗಿ 12 ವರ್ಷ ಪೂರೈಸಿದ ಮೋದಿ : ಬಿಜೆಪಿ ನಾಯಕರಿಂದ ವಿವಿಧೆಡೆ ವಿಶೇಷ ಪೂಜೆಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಣ ದುರುಪಯೋಗ : ಡಾ. ಮಹೇಶ್ ಜೋಶಿ ಅಜೀವ ಸದಸ್ಯತ್ವ ವಜಾ