ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಿಗ್ಗೆ ಅತ್ಯಂತ ದೃತಿಗೆಡಿಸುವ ಘೋರ ದುರಂತವೊಂದು ಸಂಭವಿಸಿದೆ.
ಹೋಟೆಲ್ ಒಂದರ ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಧಾರವಾಡ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ.
ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್, ಎಂದಿನಂತೆ ಇಂದು ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ಲಿಫ್ಟ್ ಬಳಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿಗಳ ಪ್ರಕಾರ, ಹೋಟೆಲ್ನಲ್ಲಿ ಸರಕು ಸಾಗಣೆ ಮಾಡಲು ಬಳಸಲಾಗುತ್ತಿದ್ದ (ಗೂಡ್ಸ್) ಲಿಫ್ಟ್ನಲ್ಲಿ ರಾಜೇಶ್ ಎರಡನೇ ಮಹಡಿಗೆ ತೆರಳುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಲಿಫ್ಟ್ನಿಂದ ಕುತ್ತಿಗೆಯನ್ನು ಹೊರಗೆ ಹಾಕಿದ್ದಾನೆ ಎನ್ನಲಾಗಿದೆ.
ದುರದೃಷ್ಟವಶಾತ್ ಲಿಫ್ಟ್ ಚಲಿಸುತ್ತಿದ್ದ ಕಾರಣ, ಲಿಫ್ಟ್ನ ಡೋರ್ ಹಾಗೂ ಸಜ್ಜು ಗೋಡೆಯ ನಡುವೆ ಆತನ ತಲೆ ಸಿಲುಕಿಕೊಂಡಿದೆ.
ಗೋಡೆಗೆ ತಲೆ ಬಲವಾಗಿ ಜಜ್ಜಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ರಾಜೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಸರಕು ಸಾಗಿಸುವ ಲಿಫ್ಟ್ನಲ್ಲಿ ಸುರಕ್ಷತಾ ನಿಯಮಗಳ ಕೊರತೆ ಇತ್ತೇ ಎಂಬ ಸಂಶಯ ಮೂಡಿಸಿದೆ.


