ರಾಮನಗರ: ರಾತ್ರಿ ಕುಟುಂಬಸ್ಥರೊಂದಿಗೆ ಕುಳಿತು ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಹೃದಯಾಘಾತದಿಂದ ಕುಸಿದುಬಿದ್ದು, ಮಗಳು ಮತ್ತು ಅಳಿಯನ ಕಣ್ಣೆದುರೇ ಕೊನೆಯುಸಿರೆಳೆದಿರುವ ದಾರುಣ ಘಟನೆ ತಾಲೂಕಿನ ಮಂಚಶೆಟ್ಟಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮಂಚಶೆಟ್ಟಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ (ಅಂದಾಜು 55 ವರ್ಷ) ಎಂದು ಗುರುತಿಸಲಾಗಿದೆ.
ಊಟದ ತಟ್ಟೆಯ ಮುಂದೆಯೇ ಕುಸಿದ ವ್ಯಕ್ತಿ ಆಗಸ್ಟ್ 22ರ ರಾತ್ರಿ ಶಿವಲಿಂಗಯ್ಯ ಅವರು ತಮ್ಮ ಮನೆಯಲ್ಲಿ ಎಂದಿನಂತೆ ಕುಟುಂಬದವರ ಜೊತೆ ಕುಳಿತು ಊಟ ಮಾಡುತ್ತಿದ್ದರು.
ಮನೆಯಲ್ಲಿ ಎಲ್ಲರೂ ನಗುನಗುತ್ತಾ ಮಾತನಾಡುತ್ತಾ ಊಟ ಸವಿಯುತ್ತಿದ್ದ ಸಂದರ್ಭದಲ್ಲೇ, ಶಿವಲಿಂಗಯ್ಯ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅವರು ಊಟದ ತಟ್ಟೆಯ ಮುಂದೆಯೇ ಪ್ರಜ್ಞಾಹೀನರಾಗಿ ಹಿಂದಕ್ಕೆ ವಾಲಿದ್ದಾರೆ.


