ಸಿಂಧನೂರು : ಮಾನ್ಯ ಜನಪ್ರಿಯ ಶಾಸಕ ಹಂಪನಗೌಡ ಬಾದರ್ಲಿ ಅವರಿಂದ ಲೋಕೋಪಯೋಗಿ ಇಲಾಖೆಯ 2025- 26ನೇ ಸಾಲಿನಲ್ಲಿ ತಾಲೂಕಿನ ಜವಳಗೇರಾ- ಅಲಬನೂರು- ಸಿಂಧನೂರು- ಬಪ್ಪುರು- ಕಿಲಾರಟ್ಟಿ ರಾಜ್ಯ ಹೆದ್ದಾರಿ ಒಂದು 170 ರಲ್ಲಿ ಕಿ.ಮೀ 34 -50 ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ರೂ, 500,00 ಲಕ್ಷಗಳು ಶಂಕುಸ್ಥಾಪನೆ ಹಾಗೂ ಜವಳಗೇರಾ–ದಢಸೂಗೂರು ರಸ್ತೆಯ ಮಧ್ಯಭಾಗದಲ್ಲಿರುವ ಆರ್.ಹೆಚ್. ಕ್ಯಾಂಪ್-04 ಅಲಬನೂರು ಕ್ರಾಸ್, ಬಳಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, 2025- 26ನೇ ಸಾಲಿನ,ಕೆ ಆರ್ ಡಿ ಸಿಎಲ್, ಯೋಜನೆ ಅಡಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ- ಹೆಡಗಿನಾಳ ಮುಖ್ಯ ರಸ್ತೆ ಕಿಮೀ 12 ರಲ್ಲಿ ನಿರ್ಮಾಣ ಕಾಮಗಾರಿ 250,00 ಲಕ್ಷಗಳು, ಜವಳಗೇರಾ ಹೆಡಗಿನಾಳ ಮುಖ್ಯರಸ್ತೆ ಕಿ ಮೀ 13 ರಲ್ಲಿ ಸೇತುವೆ ನಿರ್ಮಾಣ 250,00 ಲಕ್ಷಗಳು ಹಾಗೂ ಸಿಂಧನೂರು ಜೋಳರಾಶಿ ಆಂಜನೇಯ ದೇವಸ್ಥಾನ ದಿಂದ ನಗರದ ದುದ್ದುಪಡಿ ಶಾಲೆಯಿಂದ ಮಾಡಿಸಿರುವಾರ ಗ್ರಾಮದ ವರೆಗೆ 9 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ 2025- 26ನೇ ಸಾಲಿನಲ್ಲಿ ಸಿಎಂಐಡಿಪಿ, ಯೋಜನೆ ಅಡಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಾಜ್ಯ ಹೆದ್ದಾರಿ 197 ಮಸ್ಕಿ 150 ಎ,ಯಿಂದ ಜವಳಗೇರಾ ಅಲಬನೂರು- ಸಿಂಧನೂರು -ಕಿಲಾರಟ್ಟಿ ಕಿಲೋಮೀಟರ್ 40 -10 ರಿಂದ ಕಿಲೋ ಮೀಟರ್ 49 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ, ಸೂಡ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಆಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಶ್ರೀಮತಿ ದ್ರಾಕ್ಷಾಯಿಣಿ, ಬಸನಗೌಡ ಮಾಲಿಪಾಟೀಲ್. ಮರಿಗೌಡ. ಆರುನ್ ಪಾಷಾ ಜಾಗೀರ್ದಾರ್. ಮೌಲಪ್ಪ ಮಾಡಿಸಿರವಾರ. ನಾಗಪ್ಪ ಗೋಮರ್ಸಿ. ಎ ಇ ಇ,ಸೂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.


