ಮಾನ್ವಿ: ಪಟ್ಟಣದ ಪತ್ರಿಕಾ
ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಗುರುರಾಜ ನಾಗಲಾಪುರ ಮಾತನಾಡಿ ಅಕ್ರಮ ಜೆಲ್ಲಿ ಸಾಗಾಣಿಕ ಪ್ರಕರಣದಲ್ಲಿ ಸುಚಿತ್ ಮಿಲೇನಿಯಂ ಕಂಪನಿಯವರು ಕಲ್ಮಾಲ್ ದಿಂದ ಸಿಂಧನೂರು ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ಅಗತ್ಯವಿರುವ ಜೆಲ್ಲಿಗಾಗಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಕೃಷಿ ಜಮೀನಿನಲ್ಲಿ ಅಕ್ರಮವಾಗಿ 54 ಸಾವಿರ ಮೆಟ್ರಿಕ್ ಟನ್ ಜೆಲ್ಲಿಯನ್ನು ಸಾಗಾಣಿಕೆ ಮಾಡಲಾಗಿದ್ದು ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳ್ಳಾರಿ ರವರಿಗೆ ದೂರು ನೀಡಿದ ಹಿನ್ನೇಲೆಯಲ್ಲಿ ದೂರು ನೀಡಲಾಗಿದು ಇಲಾಖೆಯ ತನಿಖೆಯಲ್ಲಿ ಅಕ್ರಮ ಜೆಲ್ಲಿ ಸಾಗಣಿಕೆ ಧೃಡಪಟ್ಟ ಹಿನ್ನೇಲೆಯಲ್ಲಿ ಗಣಿ ಇಲಾಖೆಯಿಂದ 1ಕೋಟಿ 88 ಲಕ್ಷ ದಂಡ ವಿಧಿಸಲಾಯಿತು ನಂತರ ಕಂಪನಿಯು ನ್ಯಾಯಾಲಯದಲ್ಲಿ ಹಾಗೂ ಇಲಾಖೆಗೆ ಮೇಲ್ಮನವಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು 1ಕೋಟಿ 6ಲಕ್ಷಕ್ಕೆ ಇಳಿಸಲಾಗಿದ್ದು ಕಂಪನಿಯು ಸಂಪೂರ್ಣವಾಗಿ ದಂಡ ಪಾವತಿಸಿರುವುದಾಗಿ ಹಿಂಬರಹ ನೀಡಿದೆ ನಮ್ಮ ನಿರಂತರ ಹೋರಾಟದ ಫಲವಾಗಿ ಸರಕಾರಕ್ಕೆ ಗಣಿಯಿಂದ ಉಂಟಾಗುತ್ತಿದ್ದ ರಾಜಸ್ವ ತೆರಿಗೆ ವಂಚನೆಯನ್ನು ತಡೆಯುವುದಕ್ಕೆ ಸಾಧ್ಯವಾಗಿದೆ. ತಾಲೂಕಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ವರದಿ : ಆಂಜನೇಯ ನಸಲಾಪುರ


