LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರವಾಹ ಪರಿಹಾರ ಹಂಚಿಕೆ ಅಕ್ರಮ : ಬಾದಾಮಿ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Advertisement

ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 

2009ರಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ (flood) ತೊಂದರೆಗೀಡಾಗಿದ್ದ ತಮಿನಾಳ ಗ್ರಾಮದ ಸಂತ್ರಸ್ತರಿಗೆ ಮೀಸಲಾಗಿದ್ದ ಸೌಲಭ್ಯಗಳನ್ನು, ಅರ್ಹರಲ್ಲದವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಾಸ್ತವವಾಗಿ ಪರಿಹಾರ ಪಡೆಯಬೇಕಿದ್ದ ಸುಮಾರು 38 ಮಂದಿ ನೈಜ ಸಂತ್ರಸ್ತರನ್ನು ಕೈಬಿಟ್ಟು, ಬದಲಿಗೆ ಅರ್ಹತೆಯಿಲ್ಲದ 62 ಕುಟುಂಬಗಳಿಗೆ ಅಕ್ರಮವಾಗಿ ಮನೆ ಮತ್ತು ನಿವೇಶನಗಳನ್ನು ನೀಡಲಾಗಿದೆ ಎಂಬುದು ಸ್ಥಳೀಯರ ದೂರು. ಈ ಅನ್ಯಾಯದ ವಿರುದ್ಧ ನೊಂದ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ ಬೆನ್ನಲ್ಲೇ, ನ್ಯಾಯಾಲಯದ ಶೋಧನಾ ವಾರಂಟ್ ಪಡೆದ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ತಂಡ ಕಚೇರಿಯ ಮೇಲೆ ದಾಳಿ ನಡೆಸಿದೆ.

ಈ ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಮನೆ ಹಂಚಿಕೆಯ ಕಡತಗಳು, ಫಲಾನುಭವಿಗಳ ಪಟ್ಟಿ ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅವುಗಳ ಪರಿಶೀಲನೆಯನ್ನು ಕೈಗೊಂಡಿದ್ದಾರೆ. 

ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತನಿಖಾ ತಂಡ ತಿಳಿಸಿದೆ. ಪರಿಹಾರದ ಹೆಸರಿನಲ್ಲಿ ನಡೆದ ಈ ಹಗರಣವು ಇದೀಗ ಬಾದಾಮಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೀಡ್ಸ್ : ಇಂಗ್ಲೇನ್ದ ಗೆ ಇನ್ನಿಂಗ್ಸ್ ಮುನ್ನಡೆ ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಡಿ.ಕೆ.ಶಿವಕುಮಾರ್ ಮನವಿಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಬೆಳಿಗ್ಗೆ ಭಾವಿಯಲ್ಲಿ ಶವವಾಗಿ ಪತ್ತೆರಾಜ್ಯದ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸು : ತಹಸೀಲ್ ಕಚೇರಿಯಲ್ಲಿ ಜಯಂತಿ ಆಚರಣೆ ಪ್ರವಾಹ ಸಂತ್ರಸ್ತರ ಮನೆ ನಿವೇಶನ ಅನ್ಯರಿಗೆ ಹಂಚಿಕೆ : ಬಾದಾಮಿ ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿಮಧುಮೇಹಿಗಳಿಗೆ ಸೂಕ್ತವಾದ  ಎಸ್. ವಾರಾಹಿ ಭವನ ರೈಸ್ : ಸೌಭಾಗ್ಯ ಅರ್. ಲಸ್ಕರಿ2026-27ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವಪ್ರವಾಹ ಪರಿಹಾರ ಹಂಚಿಕೆ ಅಕ್ರಮ : ಬಾದಾಮಿ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿಪಾಕಿಸ್ತಾನ- ಇಂಗ್ಲೇನ್ಡ್ ಟೆಸ್ಟ್ ಗೆ ಮಳೆ ಅಡ್ಡಿ