LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಜ್ಯದ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸು : ತಹಸೀಲ್ ಕಚೇರಿಯಲ್ಲಿ ಜಯಂತಿ ಆಚರಣೆ 

Advertisement

ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಡಿ.ದೇವರಾಜ ಅರಸು ರವರ 111 ನೇ ಜಯಂತಿ ಕಾರ್ಯಕ್ರಮವನ್ನು ಡಿ.ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರು ರಾಜ್ಯದ ಅಭಿವೃದ್ದಿಯ ಹರಿಕಾರರಾಗಿದ್ದಾರೆ ಹಾಗೂ ವಿವಿಧ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಶ್ರಮಿಸಿದ್ದಾರೆ . ಇವರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ ಅವುಗಳು ಜನರಿಗೆ ತಲುಪುವಂತೆ ನೋಡಿಕೊಳ್ಳುವ ಮೂಲಕ ಜನರ ಅಭಿವೃದ್ದಿಗೆ ಶ್ರಮಿಸಿದರು.1974 ರಲ್ಲಿ ಊಳುವವನೇ ಭೂಮಿಯ ಒಡೆಯ ಎನ್ನುವ ಯೋಜನೆಯನ್ನು ಜಾರಿಗೆ ತಂದು ಸ್ವಂತ ತಮ್ಮ ಜಮೀನನ್ನು ಉಳುವ ರೈತರಿಗೆ ಬಿಟ್ಟುಕೊಡುವ ಮೂಲಕ ಇತರರಿಗೆ ಮಾದರಿಯಾದರು. ರಾಜ್ಯದಲ್ಲಿ ಜೀತಮುಕ್ತ  ಪದ್ದತಿ.ವಸತಿ ಶಿಕ್ಷಣವನ್ನು ಎಲ್ಲಾರಿಗೂ ದೊರೆಯುವಂತೆ ಮಾಡಿದರು. ಸಿ.ಜಿ.ಹವಾನೂರ್ ಅಯೋಗವನ್ನು ರಚಿಸಿ ರಾಜ್ಯದ ಎಲ್ಲಾರಿಗೂ ಸಮಾನವಾದ ಮಿಸಲಾತಿಯನ್ನು ಹಂಚಿಕೆ ಮಾಡಿದರು. ಸಮಾಜದ ಎಲ್ಲಾ ಸಮುದಾಯಗಳು ತಮ್ಮ ಮಕ್ಕಳಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ಕೊಡಿಸಿದ್ದಲ್ಲಿ ಅವರೆ ಸ್ವತಃ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುವ ಮೂಲಕ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಪ್ರತಿಯೊಂದು ಸಮುದಾಯದವರು ಕೂಡ ಸರಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅವುಗಳ ಪ್ರಯೋಜನೆಯನ್ನು ಪಡೆದುಕೊಂಡಲ್ಲಿ ಮಾತ್ರ ಸರಕಾರದ ಜಯಂತಿಗಳಿಗೆ ನಿಜವಾದ ಅರ್ಥ ದೊರೆಯಲಿದೆ  ಎಂದು ತಿಳಿಸಿದರು.

ಡಿ.ದೇವರಾಜ ಅರಸು ರವರ ಕುರಿತು ಶಿಕ್ಷಕರಾದ ಸುರೇಶ ವಿಶೇಷ ಉಪನ್ಯಾಸ ನೀಡಿದರು. 
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿಂದುಳಿದ ಸಮುದಾಯಗಳ ಸಾಧಕರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಬಿ.ದೇವಮಾನೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯನಾಯಕ ಪಿ.ಎಸ್.ಐ ಶರಣಪ್ಪ ಕೆ.ಹುಡಾ ಮುಖಂಡರಾದ ಮಹಾಂತೇಶ ಕಬ್ಬೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ : ಆಂಜನೇಯ ನಸಲಾಪುರ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೀಡ್ಸ್ : ಇಂಗ್ಲೇನ್ದ ಗೆ ಇನ್ನಿಂಗ್ಸ್ ಮುನ್ನಡೆ ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಡಿ.ಕೆ.ಶಿವಕುಮಾರ್ ಮನವಿಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಬೆಳಿಗ್ಗೆ ಭಾವಿಯಲ್ಲಿ ಶವವಾಗಿ ಪತ್ತೆರಾಜ್ಯದ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸು : ತಹಸೀಲ್ ಕಚೇರಿಯಲ್ಲಿ ಜಯಂತಿ ಆಚರಣೆ ಪ್ರವಾಹ ಸಂತ್ರಸ್ತರ ಮನೆ ನಿವೇಶನ ಅನ್ಯರಿಗೆ ಹಂಚಿಕೆ : ಬಾದಾಮಿ ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿಮಧುಮೇಹಿಗಳಿಗೆ ಸೂಕ್ತವಾದ  ಎಸ್. ವಾರಾಹಿ ಭವನ ರೈಸ್ : ಸೌಭಾಗ್ಯ ಅರ್. ಲಸ್ಕರಿ2026-27ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವಪ್ರವಾಹ ಪರಿಹಾರ ಹಂಚಿಕೆ ಅಕ್ರಮ : ಬಾದಾಮಿ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿಪಾಕಿಸ್ತಾನ- ಇಂಗ್ಲೇನ್ಡ್ ಟೆಸ್ಟ್ ಗೆ ಮಳೆ ಅಡ್ಡಿ