ಬೆಳಗಾವಿ: ಚಿಕನ್ ಪೀಸ್ ವಿಚಾರಕ್ಕೆ ಶುರುವಾದ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕುಡಿದ ಮತ್ತಿನಲ್ಲಿ 'ನೀನು ನನಗಿಂತ ಹೆಚ್ಚು ಚಿಕನ್ ಪೀಸ್ ತಿನ್ನುತ್ತಿದ್ದೀಯಾ' ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ.ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಆಗಸ್ಟ್ 23ರಂದು ಈ ದುರಂತ ನಡೆದಿದೆ.
ಲ್ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕಬೀರ್ ಗಂಜ್ ಮೂಲದ ಸತಿರಾಮ್ (ಸೀತಾರಾಮ್) ಚಂದ್ರದೇವ್ (30) ಕೊಲೆಯಾದ ದುರ್ದೈವಿ. ಅದೇ ಗ್ರಾಮದ ಅರುಣಕುಮಾರ್ ಬಲಿಷ್ಟರ್ ಚವ್ಹಾಣ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಇಬ್ಬರೂ ಹುಣಶ್ಯಾಳ ಪಿಜಿ ಗ್ರಾಮದಲ್ಲಿರುವ 'ಪ್ರಿಯಾ ಸ್ಟೀಲ್ಸ್' ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿಯ ಆವರಣದಲ್ಲೇ ಇದ್ದ ಶೆಡ್ನಲ್ಲಿ ಇತರ ನಾಲ್ಕೈದು ಕಾರ್ಮಿಕರೊಂದಿಗೆ ವಾಸವಾಗಿದ್ದ ಇವರು, ಆಗಸ್ಟ್ 23ರ ರಾತ್ರಿ ಚಿಕನ್ ಅಡುಗೆ ಮಾಡಿ ಮದ್ಯಪಾನ (ಎಣ್ಣೆ ಪಾರ್ಟಿ) ಮಾಡುತ್ತಿದ್ದರು.


