ನವದೆಹಲಿ: ಜುಲೈ ೨೩ ರಿಂದ ಆರಂಭವಾಗುವ ಜಿಂಬಾಬ್ವೆ ವಿರುದ್ಧದ ಟ್ವೆಂಟಿ-೨೦ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.
ಸದ್ಯ ಇಂಗ್ಲೆAಡ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ-೨೦ ಸರಣಿಯಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್ ಅವರನ್ನು ತಂಡದಿAದ ಕೈ ಬಿಡಲಾಗಿದೆ. ರಿಂಕು ಸಿಂಗ್ ತಂಡಕ್ಕೆ ಮರಳಿದ್ದಾರೆ.
ಸದ್ಯ ತಂಡದಲ್ಲಿದ್ದ ಅಕ್ಷರ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಸ್ನೋಯ್, ಹರ್ಷಿತ್ ರಾಣಾ, ಅರ್ಷದೀಪ ಸಿಂಗ್ ಹಾಗೂ ಪ್ರಸಿದ್ಧ ಕೃಷ್ಣ ಅವರನ್ನು ಕೂಡ ತಂಡದಿAದ ಕೈ ಬಿಡಲಾಗಿದೆ. ( ಅಥವಾ ವಿಶ್ರಾಂತಿ ನೀಡಲಾಗಿದೆ).
೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಶೋಕ ಶರ್ಮಾ ಹಾಗೂ ಯಶ್ ಥಾಕೂರ್ ಮೊದಲ ಬಾರಿಗೆ ತಂಡಕ್ಕೆ ಬಂದಿದ್ದಾರೆ. ಕಳಪೆ ಪ್ರದರ್ಶನದಿಂದ ಸಂಜು ಸ್ಯಾಮ್ಸನ್ ಅವರನ್ನು ತಂಡದಿAದ ಕೈ ಬಿಡಲಾಗಿದ್ದು, ಮಯಾಂಕ ಯಾದವ್ ತಂಡಕ್ಕೆ ಮರಳಿದ್ದಾರೆ. ಪ್ರಭಸಿಮರನ್ ಸಿಂಗ್ ಕೂಡ ತಂಡಕ್ಕೆ ಮರಳಿದ್ದಾರೆ.
ತಂಡ ಇಂತಿದೆ: ಶ್ರೇಯಸ್ ಅಯ್ಯರ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್, ಶಿವಂ ದುಬೈ, ಸೂರ್ಯನ್ಸ್ ಶೇಗ್ಡೆ, ರಿಂಕು ಸಿಂಗ್, ಹರ್ಷ ದುಬೈ, ವರುಣ್ ಚರ್ಕವರ್ತಿ, ಪ್ರಿನ್ಸ್ ಯಾದವ್, ಯಶ್ ಥಾಕೂರ, ಅಶೋಕ ಶರ್ಮಾ, ಮಯಾಂಕ ಯಾದವ್, ಪ್ರಭಸಿಮರನ್ ಸಿಂಗ್(ವಿಕೇಟ್ ಕೀಪರ್)


