Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜು. 3 ದಲಿತ ಜನಾಗ್ರಹ ಸಮಾವೇಶಕ್ಕೆ ಡಿಎಸ್ಎಸ್  ಕರೆ

Advertisement

ಸಿಂಧನೂರು : ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡಸಿ ಜುಲೈ 3, 2026 ಶುಕ್ರವಾರ ಫ್ರೀಡಂ ಪಾರ್ಕ್ ಬೆಂಗಳೂರು ನಲ್ಲಿ ರಾಜ್ಯ ಸಮಿತಿ ವತಿಯಿಂದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲ್ಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ  ಚಿನ್ನಪ್ಪ 
ಹೆಡಿಗಿಬಾಳ ತಿಳಿಸಿದರು.

ನಂತರ ಮಾತನಾಡಿದ ಅವರು ದಲಿತರ ಆರ್ಥಿಕ- ಸಾಮಾಜಿಕ ಸಬಲೀಕರಣಕ್ಕೆ ಸರ್ಕಾರ ವಿಶೇಷ ಘಟಕ ಯೋಜನೆ (ಎಸ್ಸಿ , ಎಸ್‌ಪಿ, -ಟಿಎಸ್‌ಪಿ,  ಕಾಯ್ದೆ ಮೂಲಕ 2013ರಂದು ಜಾರಿಗೆ ತಂದು ಸುಮಾರು 3 ಲಕ್ಷಕ್ಕೂ ಮೇಲ್ಪಟ್ಟು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಒದಗಿಸಿದೆ.

ಈ ಅನುದಾನದಿಂದ ಎಷ್ಟು ಪರಿಶಿಷ್ಟರ ಕುಟುಂಬಗಳು ಬಡತನ ರೇಖೆಯಿಂದ ಹೊರ ಬಂದಿವೆ ಇನ್ನು ಭೂಮಿ, ವಸತಿ ಸರ್ಕಾರಿ ಉದ್ಯೋಗ ಬ್ಯಾಕ್ ಲಾಗ್ ಹುದ್ದೆಗಳು ಭರ್ತಿ, ಕಡ್ಡಾಯ ಶಿಕ್ಷಣ ಮುಂತಾದವು ನೆನೆಗುದಿಗೆ ಬಿದ್ದಿವೆ, ಶೋಷಿತ ಸಮುದಾಯಗಳ ಮೇಲೆ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿ ಜುಲೈ 3, 2026ರಂದು ದಲಿತರ ಸಮಗ್ರ ಸಬಲೀಕರಣಕ್ಕಾಗಿ ಅನಿರ್ದಿಷ್ಟ ಪ್ರತಿಭಟನೆ ಸಮಾವೇಶವನ್ನು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ  ಹಮ್ಮಿಕೊಂಡಿದೆ ಸರ್ಕಾರದ ನಿಷ್ಕಾಳಜಿಯನ್ನು  ವಿರೋಧಿಸಲು ಸಮರೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕರ್ತರು ಬುದ್ದಿಜೀವಿಗಳು ಸಾಮಾಜಿಕ ಹೋರಾಟಗಾರರು ಈ ಒಂದು ಸಮಾವೇಶದಲ್ಲಿ  ಭಾಗವಹಿಸಲು ಕಲ್ಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ ಚಿನ್ನಪ್ಪ  ಹೆಡಗಿಬಾಳ ಕರೆ ನೀಡಿದರು.
 

ಈ ಸಂದರ್ಭದಲ್ಲಿ ಮೈಬೂಬ್ ಪಾಟೀಲ್ ಮುದ್ದಾಪುರ, ಪಾಸ್ಕರ್, ದೇಶಪ್ಪ ಪಾಂಡುರಂಗ ಕ್ಯಾಂಪ್, ವಿಜಯಕುಮಾರ್, ಪ್ರವೀಣ್ ಕುಮಾರ್ ಇನ್ನಿತರರು ಇದ್ದರು.

 ವರದಿ:ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಕ್ಕೇರಿ ತಾಲೂಕ ಘಟಕದ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಇವರಿಂದ ತಹಶೀಲ್ದಾರ್ ಅವರಿಗೆ ಮನವಿ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ           ಓಂ ಶಾಂತಿ ಕೇಂದ್ರದಲ್ಲಿ ಯೋಗ ದಿನಾಚರಣೆ 572 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಸೌಹಾರ್ದತೆಯ ಸಂಕೇತವಾಗಿ ಅದ್ದೂರಿಯಾಗಿ ನೆರವೇರಿದ ಹಸೇನ್ ಹುಸೇನ್ ಪಂಜಾ ಮಸೀದಿ ಉದ್ಘಾಟನೆಭಾಷಾ ದ್ರೋಹಿಗಳಿಗೆ ಅಥಣಿಯಲ್ಲಿ ಕರವೇ ಸಿಂಹಗರ್ಜನೆ: ಎಂಇಎಸ್ ಕರಾಳ ಮೋರ್ಚಾಗೆ ಅನುಮತಿ ನಿರಾಕರಿಸಲು ಆಗ್ರಹರಾಜ್ಯದಲ್ಲಿ ಬಸ್ ಪ್ರಯಾಣ ದರ ಶೇ. 25 ರಷ್ಟು ಏರಿಕೆ ಸಾಧ್ಯತೆ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿ: ಶಾಸಕ ಲಕ್ಷ್ಮಣ ಸವದಿ ಜು. 3 ದಲಿತ ಜನಾಗ್ರಹ ಸಮಾವೇಶಕ್ಕೆ ಡಿಎಸ್ಎಸ್  ಕರೆದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ