Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದ 20,668 ಚದರ ಕಿಲೋಮೀಟರ್‌ ಅರಣ್ಯ ಸೂಕ್ಷ್ಮ ಭೂಪ್ರದೇಶ :ಕೇಂದ್ರ ಸರ್ಕಾರ ಘೋಷಣೆ 

Advertisement

ನವದೆಹಲಿ: ದೇಶದ ಅತ್ಯಂತ ಸಮೃದ್ಧ ಜೀವವೈವಿಧ್ಯದ ತಾಣವಾಗಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕೇಂದ್ರ ಪರಿಸರ ಸಚಿವಾಲಯವು ಮತ್ತೊಂದು ನಿರ್ಣಾಯಕ ಹೆಜ್ಜೆ ಇಟ್ಟಿದೆ. 

ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಡುವ ಒಟ್ಟು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಎಂದು ಘೋಷಿಸಿ ಕೇಂದ್ರ ಸರ್ಕಾರವು ಈಗ ಏಳನೇ ಬಾರಿಗೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಈ ಪೈಕಿ ಕರ್ನಾಟಕ ಒಂದರಲ್ಲೇ 20,668 ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣದ ಅರಣ್ಯ ಹಾಗೂ ಸೂಕ್ಷ್ಮ ಭೂಭಾಗವು ಒಳಗೊಂಡಿರುವುದು ವಿಶೇಷವಾಗಿದೆ.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಪಶ್ಚಿಮ ಘಟ್ಟಗಳು ಹರಡಿಕೊಂಡಿದ್ದು, ಈ ಸಾಲಿನಲ್ಲಿರುವ ವಿಶಿಷ್ಟ ಸಸ್ಯ ಮತ್ತು ಪ್ರಾಣಿಸಂಕುಲವನ್ನು ಉಳಿಸಿಕೊಳ್ಳಲು ವಿಶೇಷ ರಕ್ಷಣೆ ಅಗತ್ಯವೆಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಹಿಂದೆ 2024ರ ಜುಲೈ 31ರಂದು ಹೊರಡಿಸಲಾಗಿದ್ದ ಕರಡು ಅಧಿಸೂಚನೆಯ ಅವಧಿಯು ನಿಯಮಾವಳಿಗಳ ಪ್ರಕಾರ 725 ದಿನಗಳ ನಂತರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇದೀಗ ಪುನಃ ಹೊಸದಾಗಿ ಕರಡು ಅಧಿಸೂಚನೆಯನ್ನು ಜಾರಿಗೆ ತಂದಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣಕಾಸಿನ ವಿಚಾರಕ್ಕೆ ಯಾವ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗಬಾರದು : ಶಿಕ್ಷಣ ಇಲಾಖೆ ಅತ್ತೆ ಮಾವನಿಗೆ ಊಟ ನೀಡುವುದು ಕಿರುಕುಳವಲ್ಲ : ಕರ್ನಾಟಕ ಹೈಕೋರ್ಟ್ ಕರ್ನಾಟಕದ 20,668 ಚದರ ಕಿಲೋಮೀಟರ್‌ ಅರಣ್ಯ ಸೂಕ್ಷ್ಮ ಭೂಪ್ರದೇಶ :ಕೇಂದ್ರ ಸರ್ಕಾರ ಘೋಷಣೆ ಆಗಸ್ಟ್ 1ರಂದು ಮೈಸೂರಿಗೆ ಪ್ರಧಾನಿ ಮೋದಿ : ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟನೆ   ಪಾಕಿಸ್ತಾನ ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿಕೆಪಿಎಸ್‌ಸಿ ಪರೀಕ್ಷೆ ತನಿಖೆ ಸಿಐಡಿಗೆ ವರ್ಗಾವಣೆ : ಪ್ರಿಯಾಂಕ್ ಖರ್ಗೆ ಘೋಷಣೆಪ್ರಲ್ಹಾದ್ ಜೋಶಿ ಅತ್ಯಾಚಾರಿಗಳನ್ನು ರಕ್ಷಿಸುತ್ತಾರೆ : ರಾಹುಲ್ ಗಾಂಧಿ ಹೆಚ್ಚಿದ ಶಿಕ್ಷಣ ವ್ಯಾಪ್ತಿ, ಕುಸಿದ ಮೌಲ್ಯ : ವೀರೇಶಾನಂದ ಶ್ರೀ ವಿಷಾಧರೋಹಿತ್, ವಿರಾಟ್‌ರಲ್ಲಿ ಇನ್ನು ಉತ್ತಮ ಕ್ರಿಕೆಟ್ ಉಳಿದಿದೆ: ಜಹೀರ ಅಬ್ಬಾಸ್ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ