ಅಥಣಿ :ತಾಲೂಕಿನ ಹಲ್ಯಾಳ ಏತ ನೀರಾವರಿ ಯೋಜನೆ ಜಾಕವೆಲ ಮೂಲಕ ನೀರು ಹರಿಸುವ ಕಾರ್ಯಕ್ರಮಕ್ಕೆ ಅಥಣಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿ ಮಾತನಾಡಿದರು
ಹಲ್ಯಾಳ ಏತ ನೀರಾವರಿ ಯೋಜನೆಯನ್ನು ಸುಮಾರು 38 ದಿನಗಳ ವಿಳಂಬವಾಗಿ ಆರಂಭಿಸಲಾಗಿದೆ. ಸದ್ಯ ಮುಂಗಾರು ಮಳೆ ಕ್ಷೀಣಿಸಿರುವುದರಿಂದ, ಕೆರೆ ಮತ್ತು ಬಾಂದಾರ ತುಂಬಿಸುವ ಬದಲು, ರೈತರು ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಹಲ್ಯಾಳ ಮತ್ತು ಕರಿಮಸೂತಿ ಏತ ನೀರಾವರಿ ಯೋಜನೆಗಳ ಮೂಲಕ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ.ಈ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದರು.ಎರಡನೇ ಹಂತಿನಲ್ಲಿ ಕೆರೆ ತುಂಬಿಸುವ ಕೆಲಸಕ್ಕೆ ಆದಷ್ಟು ಬೇಗ ಚಾಲನೆ ನೀಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶೇಖರ ನೇಮಗೌಡ, ಶಿವಾನಂದ ದಿವಾನಮಳ, ಸಾಯಬಣ್ಣ ಕಮತಗಿ, ಮಹಾದೇವ ಬಿಳಿಕುರಿ, ಯಲ್ಲಾಲಿಂಗ ಪಾಟೀಲ್, ಶಿವು ಗುಡ್ಡಾಪುರ, ಮಾನಸಿಂಗ ಬೋರಾಡೆ, ನಾಗರಾಜ ಪಿ ಎ ಅಧಿಕ್ಷಕರು ಅಭಿಯಂತರು, ಸಹಾಯಕ ಕಾರ್ಯಪಾಲ್ ಪ್ರಶಾಂತ ಪೋದ್ದಾರ, ಎ ಇ ಇ ಪ್ರವೀಣ ಹುನಸಿಕಟ್ಟಿ, ಎ ಇ ಇ ಸಿದ್ದುಬಾ ಲಾಂಡಗೆ, ಅಧಿಕಾರಿ ಬಸವರಾಜ್ ಗಲಗಲಿ ಸೇರಿದಂತೆ ಸಮಸ್ತ ರೈತ ಭಾಂದವರು ಹಾಗೂ ಹಿರಿಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ರಾಜು ವಾಘಮಾರೆ


