ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾನ ಮುಗಿದ ನಂತರವೂ ರಾಜಕೀಯ ವಾಕ್ಸಮರದ ಕಾವು ಮತ್ತಷ್ಟು ಹೆಚ್ಚಿದೆ.
ಮೇ. ೪ ರಂದು ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯ ಮತ ಏಣಿಕೆ ನಡೆಯಲಿದೆ. ಏತನ್ಮಧ್ಯೆ ಮತ ಏಣಿಕೆ ಕರ್ಯಕ್ಕೆ ಖಾಯಂ ಅಲ್ಲದ ಸಿಬ್ಬಂದಿಯನ್ನು ನೇಮಕ ಮಾಡಿರುವುದಕ್ಕೆ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಸುವ್ಯೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಂತೂ ಫುಲ್ ಅಲರ್ಟ್ ಆಗಿದ್ದು, ಇವಿಎಂ ಸ್ಟಾçಂಗ್ ರೂಂಗಳತ್ತ ನಿಗಾ ವಹಿಸಲು ತಮ್ಮ ಪಕ್ಷದ ಕರ್ಯಕರ್ತರಿಗೆ ಸೂಚಿಸಿದ್ದರು. ಅಲ್ಲದೇ ಚುನಾವಣೆ ಪ್ರಕ್ರಿಯೆಗಳ ಬದ್ದತೆ ಬಗ್ಗೆಯೂ ಮಮತಾ ಪ್ರಶ್ನೆ ಮಾಡಿದ್ದರು.
ಮತ ಏಣಿಕೆ ಬೂತ್ಗಳ ಏಜೆಂಟರನ್ನು ಉದ್ದೇಶಿಸಿ ಮಾತನಾಡಿರುವ ಮಮತಾ ಹಾಗೂ ವಿರೋಧಿ ಬಿಜೆಪಿ ಪಾಳಯದಲ್ಲಿನ ಮುಖಂಡರು ಫುಲ್ ಅಲರ್ಟ್ ಆಗಿದ್ದಾರೆ.

