Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಘಟನೆ ಒಂದು ಕುಟುಂಬವಿದ್ದಂತೆ: ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿ

Advertisement

ಮಲ್ಲಮ್ಮನ ಬೆಳವಡಿ : ಮನುಷ್ಯನು ಸಮಾಜದಲ್ಲಿ ಬದುಕಬೇಕಾದರೆ ಸಂಘಟನೆ ಬೇಕು ಸಂಘಟನೆಗಳು ಒಂದು ಕುಟುಂಬವಿದ್ದಂತೆ ನಾವೆಲ್ಲರೂ ಒಂದೇ ಮನಸ್ಸಿನಿಂದ ರಾಜ್ಯದ ಕನ್ನಡ ನಾಡು ನುಡಿ. ಸಂಸ್ಕೃತಿ ಮತ್ತು ಸಾರ್ವಜನಿಕರ ಹಿತಾಸಕ್ತಿಗಳ ರಕ್ಷಣೆಗಾಗಿ ಹೋರಾಡಬೇಕು ಎಂದು ಬೆಳಗಾವಿ ಜಿಲ್ಲೆಯ ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿ ಹೇಳಿದರು. ದೊಡ್ಡವಾಡ ಗ್ರಾಮದಲ್ಲಿ ಜಯ ಕರ್ನಾಟಕ ಜನಪರ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಅಖಂಡ ಭಾಗವೆಂದು ಸ್ಪಷ್ಟ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸುವರಿಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು. 
ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡನವರ ಮಾತನಾಡಿ ಸಂಘಟನೆಗಳು ಸಾಮಾಜಿಕ ಸೇವೆಗೆ ಸಾಕ್ಷಿಯಾಗಿವೆ ಮತ್ತು ಸಮಾಜದಲ್ಲಿನ ಅಂಕುಡಂಕುಗಳನ್ನು ತಿದ್ದಿ ನಡೆಸಬೇಕು ಅಂದರೆ ಸಂಘಟನೆಗಳ ಅವಶ್ಯಕತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಚಂದರಗಿ ಈಶ್ವರ ತುಪ್ಪದ, ಭಾಗ್ಯಶ್ರೀ ಪಾಟೀಲ, ಮಿನಾಕ್ಷೀ ಹತ್ತಿಗಿಡದ, ಮಹಾದೇವಿ ಹುಡೇದ, ನೂತನವಾಗಿ ಗ್ರಾಮ ಘಟಕದ ಅಧ್ಯಕ್ಷೆ ಸೋಮವ್ವಾ ಕಾಡನ್ನವರ, ಉಪಾಧ್ಯಕ್ಷೆ ಶಾಂತಾ ಮುರಗೋಡ ಪುರುಷರ ಘಟಕದ ಅಧ್ಯಕ್ಷರಾಗಿ  ಪರಮೇಶ್ ಅಂದಾನಶೆಟ್ಟಿ, ಉಪಾಧ್ಯಕ್ಷರಾಗಿ ರದ್ರಪ್ಪಾ ತೋಟಗಿ,   ಸಿದ್ದಲಿಂಗಪ್ಪಾ ಸುಣಕುಪ್ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದೂಡವಾಡ ಗ್ರಾಮದ ಜಡಿ ಸಿದ್ದೇಶ್ವರ ಸಭಾ ಭವನದಲ್ಲಿ ಜಯ ಕರ್ನಾಟಕ ಜನಪರ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿದ ಶಿವ ರೆಡ್ಡಿ ಹುಚ್ಚರಡ್ಡಿ ಹಾಗೂ ನಿಂಗಪ್ಪ ಚೌಡನವರ ಸಂಗೀತಾ ಚಂದರಗಿ ಇತರರು ಇದ್ದರು.

ವರದಿ : ದುಂಡಪ್ಪ ಹೂಲಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿಸಂಘಟನೆ ಒಂದು ಕುಟುಂಬವಿದ್ದಂತೆ: ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿದಕ್ಷಿಣ ಬಾಗಿಲು ಪ್ರವೇಶ ಈಗಲೂ ಕಠಿಣವಾಗುತ್ತಿದೇಯೇ ಬಿಜೆಪಿಗೆ?ಕುಂದಾನಗರಿಯಲ್ಲಿ ಬಾಂಗ್ಲಾದೇಶಿಗಳ ಶಂಕೆ : ಬಸ್ ನಿಲ್ದಾಣದಲ್ಲೇ 20 ಜನ ವಶಕ್ಕೆ ಕೇಸರಿ ಶಾಲಿಗೆ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ : ಮಧು ಬಂಗಾರಪ್ಪ ಎಚ್ಚರಿಕೆ ಲಡಾಖ್ ವಲಯದಲ್ಲಿ 'ಚೀತಾ' ಲಘು ಹೆಲಿಕಾಪ್ಟರ್ : ಮೇಜರ್ ಜನರಲ್ ಮೂವರಿಗೆ ಸಿಬ್ಬಂದಿ ಗಾಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ : ಸಿ.ವಿ.ಮಹಲಿಂಗಯ್ಯಅನಾಥಾಶ್ರಮ ನಡೆಸುತ್ತಿರುವವರ ಮೇಲೆ ಬಜಂತ್ರಿ ಕುಟುಂಬಸ್ಥರಿಂದ ದಬ್ಬಾಳಿಕೆಹರಣ ಶಿಕಾರಿ ( ಪಾರ್ದಿ ) ಸಮಾಜದಿಂದ ಶ್ರೀ ದಂಡಿನ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ  ಜಾತ್ರಾ ಮಹೋತ್ಸವಸರ್ಕಾರಿ ಕಾಲೇಜು ಕಟ್ಟಡದ ಉದ್ಘಾಟಿಸಿದ ಶಾಸಕ ಸುಬ್ಬಾರೆಡ್ಡಿ