ಗೊಬ್ಬೂರು ಪಕ್ಕದ ಗೊಬ್ಬುರ ಕ್ಯಾಂಪಿನಲ್ಲಿ ಶ್ರೀನಿವಾಸ್ ತಂದೆ ಪ್ರಸಾದ್ ರಾವ ರೈತರು ಬೇಡಿದ ಬೀಜಗಳನ್ನು ಪಾಕೆಟ್ ಗಳಲ್ಲಿ ತುಂಬಿ ನಕಲಿ ಬೀಜ ಮಾರಾಟ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗೊಬ್ಬೂರು ಗ್ರಾಮದ ಪಕ್ಕದಲ್ಲಿರುವ ಗೊಬ್ಬುರು ಕ್ಯಾಂಪಿನಲ್ಲಿ ಆಂಧ್ರ ಮೂಲದ ವ್ಯಕ್ತಿ ಶ್ರೀನಿವಾಸ್ ತಂದೆ ಪ್ರಸಾದ ರಾವ್ ಸುಮಾರು 15ವರ್ಷಗಳಿಂದ ಕ್ಯಾಂಪಿನಲ್ಲಿ ವಾಸಿಸುತ್ತಿದ್ದು ರೈತರಿಗೆ ವಂಚನೆ ಮಾಡಲು ಆಂಧ್ರ ಮೂಲದಿಂದ ನಕಲಿ ಬೀಜ ತಂದು ರೈತರು ಬೇಡಿದ ಬೀಜಗಳನ್ನು ಪಾಕೇಟಿನಲ್ಲಿ ತುಂಬಿ ಮಾರಾಟ ಮಾಡುತ್ತಿದ್ದನ್ನು ರೈತರು ಗಮನಿಸಿ ರೈತರ ಸೂಚನೆ ಮೇರೆಗೆ ರೈತ ಸಂಘದ ರಾಜ್ಯ ಉಪಧ್ಯಕ್ಷರಾದ ಅಂಬರೀಶ್ ಚಾಗಬಾವಿ. ಇವರು ಸಂಬಂಧ ಪಟ್ಟ ಜಾಗೃತ ದಳ (ವಿಜಿಲೆನ್ಸ್ ) ಅಧಿಕಾರಿಗಳಾದ ಶರಣಮ್ಮ ಮತ್ತು ಸುಭಾನಲ್ ಇಬ್ಬರೂ ಅಧಿಕಾರಿಗಳೊಂದಿಗೆ ಮತ್ತು ಪೊಲೀಸರ ಸಹಾಯದೊಂದಿಗೆ ದಾಳಿ ಮಾಡಿದಾಗ ಸುಮಾರು ನಾಲ್ಕು ಲಕ್ಷ ಐವತ್ತು ಸಾವಿರ ಅಂದಾಜು ಮೊತ್ತದ ನಕಲಿ ಬೀಜಗಳು ದೊರೆತಿದ್ದು ಮತ್ತು ಅದರಲ್ಲಿ ತುಂಬಲು ಯಾವುದೇ ಲೇಬಲ್ ಇಲ್ಲದಿರುವ ಪಾಕೆಟ್ ಗಳು ದೊರೆತಿದ್ದು ಮುಂದಿನ ತನಿಖೆಗೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಂಡೂ ಇವರ ಮೇಲೆ ಕ್ರಿಮಿನಲ್ ಮುಖದ್ದಮೆ ಹೂಡಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಅನ್ನುವುದನ್ನೇ ಕಾದು ನೋಡಬೇಕಾಗಿದೆ.


ವರದಿ: ಗಾರಲದಿನ್ನಿ ವೀರನಗೌಡ

