ಬಾಗಲಕೋಟೆ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಇವತ್ತಿನ ದಿನ ಜಿಲ್ಲೆಯ ಬಾಗಲಕೋಟೆ ನವನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿರವರು ಉಪಸ್ಥಿತಿಯಲ್ಲಿ ಸಭೆ ಹಾಗೂ ಕಾರ್ಯಕ್ರಮ ಜರಗಿತು ಸಭೆ ನವನಗರ ವಲಯದ ನವನಗರ ಕಾರ್ಯಕ್ಷೇತ್ರದಲ್ಲಿನ ಒಕ್ಕೂಟ ಪದಾಧಿಕಾರಿಗಳ ಸಭೆಯಲ್ಲಿ 2025-26 ನೇ ಸಾಲಿನಲ್ಲಿ ನಡೆಸಿದ CSC OLYMPIAD ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ನೋಂದಾವಣೆ ಮಾಡಿಸಿ ಅವರಿಂದ ಆನ್ಲೈನ್ ಪರೀಕ್ಷೆಯನ್ನು ಬರಿಯಿಸಿ ಆ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಗಳನ್ನು ಮಾನ್ಯ ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ ಅವರು ವಿತರಣೆ ಮಾಡಿದರು.
ಬಾಗಲಕೋಟೆ ತಾಲೂಕಿನ ಮಾನ್ಯ ಕ್ಷೇತ್ರ ಯೋಜನಾಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಒಲಂಪಿಯಾಡ್ ಪರೀಕ್ಷೆ ಬರೆಯುವುದರಿಂದ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಹೆಚ್ಚುತ್ತದೆ ಮತ್ತು ಬುದ್ಧಿ ಶಕ್ತಿ ಹೆಚ್ಚುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಬರೆಯುವುದು ಹೇಗೆ ಮತ್ತು ಪರೀಕ್ಷೆ ಬರೆಯುವಾಗ ಸಮಯದ ಪಾಲನೆಯನ್ನು ಹೇಗೆ ನಿರ್ವಹಿಸಬೇಕು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಭೆಯ ಕೊನೆಯಲ್ಲಿ 20 ಜನ ಪೋಷಕರು ತಮ್ಮ ಮಕ್ಕಳನ್ನು ನೋಂದಾವಣೆ ಮಾಡಿಸಲು ಒಪ್ಪಿದರು
ಈ ಸಭೆಯಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಿಎಸ್ಸಿ ಸೇವದಾರರು ಹಾಗೂ ತಾಲೂಕ ನೋಡಲು ಅಧಿಕಾರಿಯವರು ಸಮ್ಮುಖದಲ್ಲಿ ಸರ್ಟಿಫಿಕೇಟ್ ಗಳ ವಿತರಣೆಯನ್ನು ಮಾಡಲಾಯಿತು.

