ಕಲಾದಗಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಹಿರಿಯ ದಲಿತ ಮುಖಂಡ ಆರ್.ಬಿ. ತಿಮ್ಮಾಪುರಗೆ ಉಪಮುಖ್ಯಮಂತ್ರಿ ಅಥವಾ ಪ್ರಮುಖ ಖಾತೆಯ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಶೋಕ ಮಾದರ ಅವರು ಆಗ್ರಹಿಸಿದ್ದಾರೆ.
ಅಶೋಕ ಮಾದರ ಅವರು,ಕೃಷ್ಣಾ ನದಿ ತೀರದಿಂದ ಬಬಲಾದಿಯ ಶ್ರೀ ಸದಾಶಿವ ಮುತ್ತ್ಯಾನ ಮಠದವರೆಗೆ ದೀಡ ನಮಸ್ಕಾರ ಹಾಕುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕರ್ತ ಅಶೋಕ ಮಾದರ ಮಾತನಾಡಿ,ಆರ್.ಬಿ. ತಿಮ್ಮಾಪುರ ಅವರು 40 ವರ್ಷಗಳಿಂದ ಪಕ್ಷಕ್ಕೆ ದುಡಿದವರು. ಬಾಗಲಕೋಟೆ ಜಿಲ್ಲೆಯ ದಲಿತರ, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಚಿವರಾಗಿ, ವಿಧಾನ ಪರಿಷತ ಸದಸ್ಯರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಡಿ.ಕೆ. ಶಿವಕುಮಾರ ಸಂಪುಟದಲ್ಲಿ ತಿಮ್ಮಾಪುರ ಸಾಹೇಬರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಮಾಜ ಕಲ್ಯಾಣ, ಗೃಹ ಖಾತೆಯಂತಹ ಪ್ರಮುಖ ಸಚಿವ ಸ್ಥಾನ ನೀಡಬೇಕು. ಜಿಲ್ಲೆಗೆ ನ್ಯಾಯ ಸಿಗಬೇಕು" ಎಂದು ಆಗ್ರಹಿಸಿದರು. ತಿಮ್ಮಾಪುರಗೆ ಸಚಿವ ಸ್ಥಾನ ಸಿಗಲಿ ಎಂದು ಮುತ್ತ್ಯಾನ ಜಾತ್ರೆಯಲ್ಲಿ ಹರಕೆ ಹೊತ್ತಿದ್ದೆ. ಅದಕ್ಕಾಗಿ ಇಂದು ದೀಡ ನಮಸ್ಕಾರ ಹಾಕಿದ್ದೇನೆ ಎಂದು ಅವರು ತಿಳಿಸಿದರು.
ವರದಿ : ಬಸವರಾಜ ಪೂಜಾರಿ

