ಸಿಂಧನೂರು : ಆನ್ಲೈನ್ ಮೂಲಕ ನಿಯಂತ್ರಣವಿಲ್ಲದೆ ನಡೆಯುತ್ತಿರುವ ಔಷದ ಮಾರಾಟವನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ರಿ ಅಂಡ್ ಡ್ರಗ್ಲಿಸ್ಟ್ AlOCD ನೇತೃತ್ವದಲ್ಲಿ ಮೇ 20 ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ಮತ್ತು ಮುಷ್ಕರಕ್ಕೆ ಕರೆಯ ಮೇರೆಗೆ ಸಿಂಧನೂರು ತಾಲೂಕಿನಾದ್ಯಂತ ಎಲ್ಲಾ ಚಿಲ್ಲರೆ ಮತ್ತು ಸಗಟು ಔಷಧಾಲಯಗಳು ಬುದುವಾರ ಮಧ್ಯಾಹ್ನ ೧೨ ಗಂಟೆಯವರೆಗೆ ಭಾಗಶಃ ಬಂದ್ ಆಚರಿಸಲಾಯಿತು
ಪ್ರತಿಭಟನೆಯ ಮುಖ್ಯ ಕಾರಣಗಳು :
ಇ -ಫಾರ್ಮಸಿಗಳ ಪ್ಲಾಟ್ ಫಾರ್ಮಗಳ ಮೂಲಕ ನಡೆಯುತ್ತಿರುವ ಆನಿಯಂತ್ರಿತ ಮತ್ತು ಕಾನೂನು ಬಹಿರ ಔಷಧ ಮಾರಾಟಕ್ಕೆ ತಡೆ ಒಡ್ಡಬೇಕು, ಆನ್ಲೈನ್ ಮೂಲಕ ನಕಲಿ ಅಥವಾ ನಿಷೇಧಿತ ಔಷಧಗಳು ಸುಲಭವಾಗಿ ದೊರೆಯುತ್ತಿದ್ದು ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಹಾನಿಯಾಗುವ ಆತಂಕವಿದೆ ಇದರಿಂದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಗಾತ್ರದ ಮೆಡಿಕಲ್ ಅಂಗಡಿ ಮಾಲೀಕರ ಜೀವನೋಪಾಯಕ್ಕೆ ಈ ಆನ್ಲೈನ್ ವ್ಯವಹಾರ ಸಂಚಾಕಾರ ತಂದೊಡ್ಡಿದೆ ಎಂದು ಆಗ್ರಹಿಸಿ ಸಾಂಕೇತಿಕ ಮುಷ್ಕರ ಹಮ್ಮಿಕೊಂಡು ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ತಾಲೂಕ ಔಷದ ವ್ಯಾಪಾರಿಗಳ ಕ್ಷಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಶೇಖರ್ ಕೆ. ಕಾರ್ಯದರ್ಶಿ ಭಾರ್ಗವ ಜಿ. ಉಪಾಧ್ಯಕ್ಷರಾದ ಶಶಿಕುಮಾರ್ ದಾನಿ. ಪಣಿ ಕುಮಾರ. ಸೇರಿದಂತೆ ಸುಬ್ಬರಾವ್ ಎಂ.ನಾಗೇಶ್ ಎಸ್. ಫಾರ್ಮಸಿ ವಿದ್ಯಾರ್ಥಿಗಳು ಹಾಗೂ ಸಮಸ್ತ ತಾಲೂಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸೇರಿದಂತೆ ಇನ್ನು ಅನೇಕರು ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ

