ಮಾನ್ವಿ: ಪಟ್ಟಣದಲ್ಲಿ ಚತುಷ್ಪಥ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಸಿಂಧನೂರು ರಸ್ತೆಯಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿನ ಶ್ರೀ ವಾಲ್ಮೀಕಿ ಮಹಾರ್ಷಿಗಳ ಪುತ್ತಳಿಯನ್ನು ಸ್ಥಳತರಿಸಬೇಕಾಗಿರುವ ಹಿನ್ನೇಲೆಯಲ್ಲಿ ಶಾಸಕ ಜಿ.ಹಂಪಯ್ಯ ನಾಯಕ್ ರವರು ಸಿಂಧನೂರು ರಸ್ತೆಯಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಹತ್ತಿರ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅವರಣದಲ್ಲಿ ಹಾಗೂ ರಾಜ್ಯ ಉಗ್ರಣ ನಿಗಮದ ಅವರಣದಲ್ಲಿ ನೂತನ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ಪುತ್ತಳಿಯನ್ನು ಕೂಡಿಸುವುದಕ್ಕೆ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ಬರುವ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿನ ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ತಳಿಯನ್ನು ಸ್ಥಳತರಿಸಬೇಕಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪಟ್ಟಣದಲ್ಲಿ ಮಹಾನಿಯರ ವೃತ್ತ ನಿರ್ಮಾಣ ಮಾಡಲು ಅನುಕೂಲ ವಾಗುವಂತೆ ಸಂಬಂದಿಸಿದ ಅಧಿಕಾರಿಗಳು ಸ್ಥಳ ಗುರುತಿಸಿ ಪರಿಶೀಲನೆ ಮಾಡಿ ಶೀಘ್ರವೇ ಶ್ರೀ ವಾಲ್ಮೀಕಿ ಮಹಾರ್ಷಿಗಳ ವೃತ್ತ ನಿರ್ಮಾಣ ಹಾಗೂ ಶ್ರೀ ವಾಲ್ಮೀಕಿ ಮಹಾರ್ಷಿಗಳ ಪುತ್ತಳಿಯನ್ನು ಕೂಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಉಗ್ರಣ ನಿಗಮದ ತಾಲೂಕು ವ್ಯವಸ್ಥಾಪಕರಾದ ಮುನಿಸ್ವಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿಗಳಾದ ಮಾಳಪ್ಪ ರವರಿಗೆ ಸೂಚಿಸಿದರು.
ಸಮಾಜದ ಮುಖಂಡರಾದ ರಾಜ ಸುಭಾಶ್ಚಂದ್ರ ನಾಯಕ ಶಿವರಾಜ್ ನಾಯಕ ಹನುಮೇಶ ನಾಯಕ ಸಾದಾಪೂರ ಹಂಪಯ್ಯ ನಾಯಕ ಹನುಮಂತ ಸಿಕಲ್ ಗಂಗಯ್ಯ ನಾಯಕ ರಾಮಣ್ಣನಾಯಕ ಕೊಂಡಯ್ಯನಾಯಕ ಹನುಮಂತರಾಯ ನಾಯಕ ಸೇರಿದಂತೆ ಇನ್ನಿತರರು ಇದ್ದರು.


