LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅನುಮಾನಾಸ್ಪದ 23.14 ಲಕ್ಷ ಜನರ ಪಿಂಚಣಿಗೆ ತಡೆ :ಜಿ. ಪರಮೇಶ್ವರ್ 

Advertisement

ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಸುಮಾರು 23.14 ಲಕ್ಷ ಜನರನ್ನು 'ಸಂದೇಹಾಸ್ಪದ ಫಲಾನುಭವಿಗಳು' ಎಂದು ಗುರುತಿಸಿ, ಅವರ ಪಿಂಚಣಿ ಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಶಾಸಕಿ ಎಂ. ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲಿಸಿ, ಅವರು ನಿಯಮಾನುಸಾರ ಅರ್ಹರಾಗಿದ್ದರೆ ಮತ್ತೆ ಪಿಂಚಣಿ ಮರುಚಾಲನೆಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಅನರ್ಹರ ಪಿಂಚಣಿ ರದ್ದು: ಸಾಮಾಜಿಕ ಭದ್ರತಾ ಯೋಜನೆಯಡಿ ನಿಯಮ ಉಲ್ಲಂಘಿಸಿ ಪಿಂಚಣಿ ಪಡೆಯುತ್ತಿದ್ದ 51,720 ಫಲಾನುಭವಿಗಳ ಪಿಂಚಣಿಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ದಾಖಲೆ ಮರುಪರಿಶೀಲನೆ: ಆದಾಯ ಮಿತಿ ಸೇರಿದಂತೆ ವಿವಿಧ ನಿಯಮಗಳ ಅಡಿಯಲ್ಲಿ ಅರ್ಹತೆ ಹೊಂದಿಲ್ಲದ ಶಂಕೆಯಿರುವ 23.14 ಲಕ್ಷ ಜನರ ಪಿಂಚಣಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದು, ದಾಖಲೆ ಪರಿಶೀಲನೆ ಬಳಿಕ ಅರ್ಹರಿಗೆ ಮಾತ್ರ ಮುಂದುವರಿಸಲಾಗುತ್ತದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಪುರ  ಶ್ರೀನಿವಾಸ ವಿದ್ಯಾ ಸಂಸ್ಥೆಯಲ್ಲಿ  80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ "ಕಾಯಕಯೋಗಿ". ಡಾ. ಕಾಳೇಗೌಡ್ರುನಾಳೆಯಿಂದ ಪಾಕ್-ಇಂಗ್ಲೆAಡ್ ಮೊದಲ ಟೆಸ್ಟ್ ಪಂದ್ಯ ಭಾರತ ತಂಡಕ್ಕೆ ಪಾಕ್ ವಿರುದ್ಧ ಗೆಲುವು ಅನಿವಾರ‍್ಯಭಾರತ ೨ ನೇ ಇನ್ನಿಂಗ್ಸ್ ೩ ವಿಕೆಟ್‌ಗೆ ೧೦೯ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿ ಸೇರಿ 13 ಕಡೆ ಇಡಿ ದಾಳಿಡಬಲ್ ಮರ್ಡರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪ್ರಿಯಕರನ ಜೊತೆ ಸೇರಿ ಪತಿ ಹಾಗೂ ಮಗನ ಹತ್ಯೆ​ಗ್ಯಾದಿಗುಂಟೆ ಗ್ರಾಮದಲ್ಲಿ ಇನಾಂ ಜಮೀನು ಮರು ಮಂಜೂರಾತಿ ಅಕ್ರಮ : ಅರ್ಹ ಹಕ್ಕುದಾರರಿಗೆ ವಂಚನೆ ಆರೋಪ.ಶ್ರಾವಣ ಮೊದಲನೇ ಶನಿವಾರ ಪ್ರಯುಕ್ತ ಗುರು ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಶನೇಶ್ವರ ಪ್ರವಚನ ಪಠಣ :  ಟ್ರಾವೆಲ್ಸ್ ಮಂಜುನಾಥ್ ಅನುಮಾನಾಸ್ಪದ 23.14 ಲಕ್ಷ ಜನರ ಪಿಂಚಣಿಗೆ ತಡೆ :ಜಿ. ಪರಮೇಶ್ವರ್ ಪ್ರತಿ ಜಿಲ್ಲೆಯಲ್ಲಿಯೂ ತಲಾ 50 ಸಾವಿರ ನಿವೇಶನ ಹಂಚಿಕೆ : ಜಿ. ಪರಮೇಶ್ವರ್ ಘೋಷಣೆ