Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಂದಾನಗರಿಯಲ್ಲಿ ಬಾಂಗ್ಲಾದೇಶಿಗಳ ಶಂಕೆ : ಬಸ್ ನಿಲ್ದಾಣದಲ್ಲೇ 20 ಜನ ವಶಕ್ಕೆ 

Advertisement

ಬೆಳಗಾವಿ: ಕುಂದಾನಗರಿಯಲ್ಲಿ ಬಾಂಗ್ಲಾದೇಶದ ಅಕ್ರಮ ನಿವಾಸಿಗಳು ಬೀಡುಬಿಟ್ಟಿದ್ದಾರೆಂಬ ಸುಳಿವು ಸಿಗುತ್ತಿದ್ದಂತೆ ನಗರದ ಬಸ್ ನಿಲ್ದಾಣದ ಸಮೀಪ ಪೊಲೀಸ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 

ಹುಬ್ಬಳ್ಳಿಯ ಮಾರ್ಗವಾಗಿ ಮೂರು ವಾಹನಗಳಲ್ಲಿ ಅಪರಿಚಿತರು ಆಗಮಿಸಿದ್ದಾರೆಂದು ಹಿಂದೂ ಸಂಘಟನೆಯ ಪ್ರಮುಖರು ನೀಡಿದ ದೂರಿನ ಮೇರೆಗೆ ಎಚ್ಚೆತ್ತ ಪೊಲೀಸರು, ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಮಾಳಮಾರುತಿ ಪೊಲೀಸ್ ಕೇಂದ್ರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ಪತ್ತೆಯಾದ ಕಾರ್ಮಿಕರು ತಾವು ಬಾಂಗ್ಲಾದೇಶದವರಲ್ಲ ಎಂದು ಸ್ಪಷ್ಟಪಡಿಸಿದ್ದು, ಭಾರತದ ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದು ಇಲ್ಲಿನ ಶಹಾಪುರದಲ್ಲಿ ಚಿನ್ನದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. 

ಚುನಾವಣೆ ಮುಗಿಸಿ ಮರಳುತ್ತಿದ್ದ ಈ ಗುಂಪಿನ ಗುರುತಿನ ಚೀಟಿ, ಮೊಬೈಲ್ ಮತ್ತು ಮತದಾನದ ದಾಖಲೆಗಳನ್ನು ಅಧಿಕಾರಿ ನಾರಾಯಣ ಭರಮನಿ ಅವರ ಸಮ್ಮುಖದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ.

ಸದ್ಯ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ವೇಳೆ, ಪ್ರಾಥಮಿಕ ತನಿಖೆಯಲ್ಲಿ ಇವೆಲ್ಲವೂ ನೈಜವಾಗಿ ಕಂಡಿದ್ದರಿಂದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರ ಹೆಬ್ಬೆರಳ ಗುರುತುಗಳನ್ನು ಸಂಗ್ರಹಿಸಿ, ಆ ಬಳಿಕ ಅವರನ್ನು ಸ್ವಸ್ಥಾನಕ್ಕೆ ಕಳುಹಿಸಲಾಗಿದೆ. ಆದರೆ ಆಂತರಿಕವಾಗಿ ತಾಂತ್ರಿಕ ತನಿಖೆ ಇನ್ನೂ ಜಾರಿಯಲ್ಲಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಕ್ಷಿಣ ಬಾಗಿಲು ಪ್ರವೇಶ ಈಗಲೂ ಕಠಿಣವಾಗುತ್ತಿದೇಯೇ ಬಿಜೆಪಿಗೆ?ಕುಂದಾನಗರಿಯಲ್ಲಿ ಬಾಂಗ್ಲಾದೇಶಿಗಳ ಶಂಕೆ : ಬಸ್ ನಿಲ್ದಾಣದಲ್ಲೇ 20 ಜನ ವಶಕ್ಕೆ ಕೇಸರಿ ಶಾಲಿಗೆ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ : ಮಧು ಬಂಗಾರಪ್ಪ ಎಚ್ಚರಿಕೆ ಲಡಾಖ್ ವಲಯದಲ್ಲಿ 'ಚೀತಾ' ಲಘು ಹೆಲಿಕಾಪ್ಟರ್ : ಮೇಜರ್ ಜನರಲ್ ಮೂವರಿಗೆ ಸಿಬ್ಬಂದಿ ಗಾಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ : ಸಿ.ವಿ.ಮಹಲಿಂಗಯ್ಯಅನಾಥಾಶ್ರಮ ನಡೆಸುತ್ತಿರುವವರ ಮೇಲೆ ಬಜಂತ್ರಿ ಕುಟುಂಬಸ್ಥರಿಂದ ದಬ್ಬಾಳಿಕೆಹರಣ ಶಿಕಾರಿ ( ಪಾರ್ದಿ ) ಸಮಾಜದಿಂದ ಶ್ರೀ ದಂಡಿನ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ  ಜಾತ್ರಾ ಮಹೋತ್ಸವಸರ್ಕಾರಿ ಕಾಲೇಜು ಕಟ್ಟಡದ ಉದ್ಘಾಟಿಸಿದ ಶಾಸಕ ಸುಬ್ಬಾರೆಡ್ಡಿಅಡಹಳ್ಳಿ  ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾಂಡ   ಭ್ರಷ್ಟಾಚಾರ ಆರೋಪ  ಪಂಚಾಯತ್‌ ಅಧಿಕಾರಿಗಳ ಅಮಾನತಿಗೆ ಒತ್ತಾಯಬಿರುಗಾಳಿ ಸಹಿತ ಮಳೆಗೆ ಉರುಳಿಬಿದ್ದ ವಿದ್ಯುತ್ ಕಂಬಗಳು, ಬೃಹತ್ ಮರ