ಬೆಳಗಾವಿ : ಜೆಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ಈಶ್ವರಕೊಳ್ಳ ಹತ್ತಿರ ಭೀಕರ ಅಪಘಾತ ಹತ್ತಿರ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬನ ಕೈ ಮೂಳೆ ಮುರಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಶಿವನ ಮೂರ್ತಿ ಹತ್ತಿರ ಸಂಭವಿಸಿದೆ.
ರಾಮದುರ್ಗ ಪಟ್ಟಣದ ಶಿವಾನಂದ ಸೊಳ್ಳಿಭಾವಿ,ರಾಹುಲ ,ಈರಣ್ಣ ಮತ್ತು ರಾಘವೇಂದ್ರ ಕೊಳ್ಳಿ ಇವರೆಲ್ಲರೂ ರಾಮದುರ್ಗದಿಂದ ಗದಗಕಡೆಗೆ ಸ್ವಂತ ಕೆಲಸಕ್ಕೆ ಅಂತಾ ಹೊರಟ್ಟಿದ್ದರು,ಪಟ್ಟಣದ ಶಿವಾನಂದ ಸೊಳ್ಳಿಭಾವಿ ಎಂಬರಗೆ ಬಲಗೈ ಮೂಳೆ ಮುರದಿದೆ ಉಳದಿದ್ದು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಾಮದುರ್ಗ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.



ಮತ್ತೊಂದು ಕಾರು ಮಹಾರಾಷ್ಟ್ರದಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ದರ್ಶನ ಪಡೆದುಕೊಂಡು ರಾಮದುರ್ಗದ ಹೊರವಲಯದಲ್ಲಿದ್ದ ಮುಳ್ಳೂರ್ ಗುಡ್ಡದಲ್ಲಿದ್ದ ಶ್ರೀ ರಮೇಶ್ವರ್ (ಶಿವನ ಮೂರ್ತಿ )ದರ್ಶನ್ ಪಡೆಯಲಿಕ್ಕೆ ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ರಾಮದುರ್ಗ ಕಡೆಗೆ ಬರುವ ಸಂಧರ್ಭದಲ್ಲಿ ಶ್ರೀ ಈಶ್ವರಕೊಳ್ಳ ಹತ್ತಿರ ಭೀಕರ ಅಪಘಾತ ನಡದಿದೆ ಹತ್ತಿರ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರನಲ್ಲಿದ್ದ್ 5ಜನಕ್ಕೆ ಗಾಯವಾಗಿ ಖಾಸಗಿ ಆಸ್ಪತ್ರೆಗೆ ಧಾಖಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ವರದಿ: ಮಂಜುನಾಥ ಕಲಾದಗಿ ರಾಮದುರ್ಗ

