ನವದೆಹಲಿ : ಪ್ಯಾರಾ-ಜಂಪಿಂಗ್ ಮಾಡುವಾಗ ಘೋರ ದುರಂತ ಸಂಭವಿಸಿ ಕರ್ನಾಟಕ ಮೂಲದ ಯೋಧ ಓರ್ವರು ಸಾವನ್ನಪ್ಪಿರುವ ಘಟನೆ ಆಗ್ರಾದಲ್ಲಿ ಮಾಲ್ಪುರದಲ್ಲಿರುವ ಡ್ರಾಪ್ ವಲಯದಲ್ಲಿ ನಡೆದಿದೆ.
ಪ್ಯಾರಾ-ಜಂಪಿಂಗ್ ವೇಳೆ ಯೋಧ ಮಂಜುನಾಥ್ ಅವರ ಪ್ಯಾರಾಚೂಟ್ ತೆರೆಯದ ಕಾರಣ ಅವರು ಸಾವೀಗಿಡಾಗಿದ್ದಾರೆ. ಪ್ಯಾರಾ-ಜಂಪಿಂಗ್ ವೇಳೆ ವಾಯುಪಡೆಯ ವಿಮಾನದಿಂದ 12 ಸೈನಿಕರು ಜಿಗಿದರು.
ಈ ವೇಳೆ ಮಂಜುನಾಥ್ ಅವರು ಹೊರತುಪಡಿಸಿ ಎಲ್ಲಾ ಸೈನಿಕರ ಪ್ಯಾರಾಚೂಟ್ ತೆಗೆದುಕೊಂಡಿವೆ. ಆದರೆ ದುರ್ವಿಧಿ ಎಂಬಂತೆ ಮಂಜುನಾಥ್ ಅವರ ಪ್ಯಾರಾಚೂಟ್ ಓಪನ್ ಆಗದ ಕಾರಣ ಅವರು ಘೋರ ದುರಂತದಲ್ಲಿ ಮೃಪಟ್ಟಿದ್ದಾರೆ.