Ad imageAd image

ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡಲು ಹೋದ ಲೈನಮನ ಮೇಲೆ ಹಲ್ಲೆ ಮಾಡಿ ಎತ್ತಿ ಒಗೆದ್ರು

Bharath Vaibhav
ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡಲು ಹೋದ ಲೈನಮನ ಮೇಲೆ ಹಲ್ಲೆ ಮಾಡಿ ಎತ್ತಿ ಒಗೆದ್ರು
WhatsApp Group Join Now
Telegram Group Join Now

ಗೋಕಾಕ : ಬಾಕಿ ಇದ್ದ ವಿದ್ಯುತ್ ಬಿಲ್ ವಸೂಲಿ ಮಾಡಲು ಹೋದ ಲೈನಮನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ನಡೆದಿದೆ.

ಸುಮಾರು 17,146. ರೂ ವಿದ್ಯುತ್ ಬಿಲ್ ಬಾಕಿಯನ್ನು ದುಪದಾಳ ಗ್ರಾಮದ ಖಾದೀರಸಾಬ ಪಠಾಣಸಾಬ ಕೊತವಾಲ ತುಂಬದೆ ಇದ್ದ ಕಾರಣ 7 ತಿಂಗಳ ಹಿಂದೆ ಸ್ಥಳಿಯ ಲೈನಮನ ಅವರಿಗೆ ತುಂಬಲು ತಿಳಿಸಿದರು ಕೇಳದಿದ್ದಾಗ ಸಂಪರ್ಕ ಕಡಿತ ಮಾಡಿ ವಾಯರ ಕಟ್ ಮಾಡಿದ್ದರು,

ಸಂಪರ್ಕ ಕಡಿತ ಮಾಡಿದ್ದರು ಸಹ ಖಾದಿರಸಾಬ ಪಠಾಣಸಾಬ ಕೊತವಾಲ ಇತ ಅನದಿಕೃತವಾಗಿ ವಿದ್ಯುತ ಸಂಪರ್ಕ ತೆಗೆದುಕೊಂಡಿದ್ದು ತಿಳಿದು ಬಂದಿದ್ದರಿಂದ ಹಿರಿಯ ಅಧಿಕಾರಿಗಳ ಆದೇಶದಂತೆ ಲೈನಮನ್ ಪ್ರಮೋದ ಮಾಳಗಿ ಮತ್ತು ಸಿಬ್ಬಂದಿಗಳು ಸೇರಿ ಕಟ್ ಮಾಡಿದ ವಾಯರ ತರಲು ಹೋದಾಗ ಖಾದಿರಸಾಬ ಪಠಾಣಸಾಬ ಕೊತವಾಲ ಇತ ಪ್ರಮೋದ ಮಾಳಗಿ ಇತನನ್ನು ಹಿಗ್ಗಾಮುಗ್ಗಾ ಥಳಿಸಿ, ಮೇಲೆ ಎತ್ತಿ ಕೆಳಗೆ ಒಗೆದಿದ್ದಾನೆ,.

ಆತನನ್ನು ಒಗೆದಿದ್ದನ್ನು ನೋಡಿದರೆ ಎನಾದರೂ ಅನಾಹುತ ಆಗಬಹುದಿತ್ತು ಅದೃಷ್ಟಾವಶ ಯಾವುದೆ ಅನಾಹುತ ಸಂಬವಿಸಿಲ್ಲ, ಇನ್ನು ಇದೆ ರೀತಿ ಬಾಕಿ ವಸೂಲಿ ಮಾಡಲು ಹೋದವರ ಮೇಲೆಲ್ಲಾ ಇದೆ ರೀತಿ ಹಲ್ಲೆ ಆಗಿತಿದ್ದರೆ,,ಹೊಣೆ ಯಾರು,,ಇನ್ನು ಹಲ್ಲೆ ಮಾಡಿದವರ ಮೇಲೆ ಹೆಸ್ಕಾಂ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ,,ಇದರ ಜೊತೆಯಲ್ಲಿ ಲೈನಮನಗಳು ಕೂಡಾ ಅಧಿಕಾರಿಗಳು ನಮ್ಮನ್ನು ಕಾಪಾಡಲು ಯಾವ ರೀತಿ ನಡೆದುಕೊಳ್ಳುತ್ತಾರೆಂಬುದನ್ನು ಕಾದು ನೋಡುತಿಧ್ದಾರೆ.

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!