Ad imageAd image

ಕನ್ನಡ ಮಾತನಾಡಿ ಅಂತ ಹೇಳಿದ್ದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪೋಕ್ಸೋ ಕೇಸ್ ದಾಖಲು 

Bharath Vaibhav
WhatsApp Group Join Now
Telegram Group Join Now

ಬೆಳಗಾವಿ: ಕೆ ಎಸ್ ಆರ್ ಟಿ ಸಿ ಬಸ್‌ನಲ್ಲಿ ಟಿಕೆಟ್ ನೀಡುವಂತೆ ಮರಾಠಿಯಲ್ಲಿ ಕೇಳಿದ ಯುವತಿಗೆ ಕನ್ನಡದಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದ ಕಂಡಕ್ಟರ್ ವಿರುದ್ಧ ಇದೀಗ ಪೋಕ್ಸೋ ಕೇಸ್‌ ದಾಖಲಾಗಿದೆ.

ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾರ್ಗದ ಬಸ್‌ನಲ್ಲಿ ಸಂಚರಿಸುತ್ತಿದ್ದ ಯುವತಿ ಮರಾಠಿಯಲ್ಲಿ ಟಿಕೆಟ್‌ ಕೇಳಿದ್ದಾಳೆ.ಇದಕ್ಕೆ ಕಂಡಕ್ಟರ್ ಮಹದೇವ ಹುಕ್ಕೇರಿ ಆಕೆಗೆ ಕನ್ನಡದಲ್ಲಿ ಟಿಕೆಟ್‌ ಕೇಳುವಂತೆ ತಾಕೀತು ಮಾಡಿದಾಗ ಕಿರಿಕ್‌ ಮಾಡಿದ ಯುವತಿ ಮರಾಠಿ ಯುವಕರ ಜೊತೆಗೂಡಿ ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ನಿರ್ವಾಹಕ ಮಹದೇವ್‌ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು

ಘಟನೆಯ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಕಂಡಕ್ಟರ್‌ ಕಂಪ್ಲೇಟ್‌ ಅನ್ವಯ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಮಾರುತಿ ಆಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು ಹಾಗೂ ಬಾಳು ಸುರೇಶ್ ಗೊಂಜೇಕರ ಎಂಬುವರನ್ನು ಬಂಧಿಸಿದ್ದರು.

ಆದರೆ ಹಲ್ಲೆ ಕಿರಿಕ್ ತೆಗೆದ ಯುವತಿ ಇದೀಗ ನಿರ್ವಾಹಕ ಮಹದೇವ ಹುಕ್ಕೇರಿ ವಿರುದ್ಧ ದೂರು ನೀಡಿದ್ದು, ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವುದಾಗಿ ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article
error: Content is protected !!