Ad imageAd image

ಗುಂಡೆವಾಡಿ ಗ್ರಾಮದಲ್ಲಿ 133 ಕೋಟಿ ರೂ ವೆಚ್ಚದ 11 ಕೆರೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮದ ಪೂರ್ವ ಭಾವಿ ಸಭೆ

Bharath Vaibhav
ಗುಂಡೆವಾಡಿ ಗ್ರಾಮದಲ್ಲಿ 133 ಕೋಟಿ ರೂ ವೆಚ್ಚದ 11 ಕೆರೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮದ ಪೂರ್ವ ಭಾವಿ ಸಭೆ
WhatsApp Group Join Now
Telegram Group Join Now

ಅಥಣಿ:  ರಾಜಕೀಯ ಜೀವನದಲ್ಲಿ ಯಾವುದೇ ಉದ್ದೇಶ ಹೊಂದಿ ಯಾವ ಕೆಲಸ ಮಾಡಿಲ್ಲ ಸ್ವಾರ್ಥ ರಾಜಕಾರಣ ನಾನಲ್ಲ ನನಗೆ ನಿಮ್ಮ ಉಪಕಾರ ತೀರಿಸಲು ಇ ಭಾಗಕ್ಕೆ ನೀರಾವರಿ ಮಾಡಬೇಕೆಂಬ ಉದ್ದೇಶ ನನ್ನದಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ದಿ.22ರಂದು ಕಾಗವಾಡ ಮತಕ್ಷೇತ್ರದ ಗುಂಡೆವಾಡಿ ಗ್ರಾಮದಲ್ಲಿ 133 ಕೋಟಿ ರೂ ವೆಚ್ಚದ 11 ಕೆರೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ ಯೋಜನೆ ಯಶಸ್ವಿ ಗೆ ಸಣ್ಣಹಾಗು ದೊಡ್ಡ ರೈತನ ಸಹಕಾರ ಅವಶ್ಯಕತೆಯಿದೆ ಎಲ್ಲರೂ ಸಮಾಧಾನ ತಾಳ್ಮೆಯಿಂದ ಯೋಜನೆಗೆ ಸಹಕರಿಸಿ ಎಂದರು.
ಅವರು ನಂತರ ಸುದ್ದಿಗಾರ ಪ್ರಶ್ನೆಗೆ ಮಾತನಾಡಿ ಮರಾಠಿ ಮಾತನಾಡುವಂತೆ ಒತ್ತಾಯಿಸಿ ಬಸ್‌ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಿರುವ ವಿಚಾರವಾಗಿ ಕಾಗವಾಡ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದು ಕನ್ನಡದ ವಿಷಯಕ್ಕೆ ಬಂದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಹಾಗೂ ಬಸ್ ಕಂಡೆಕ್ಟರ್ ಪರವಾಗಿ ನಮ್ಮ ಸರ್ಕಾರ ಯಾವತ್ತೂ ಇದ್ದು ಅವರ ರಕ್ಷಣೆ ನಮ್ಮ ಹೊಣೆಯಾಗಿದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳುವದಾಗಿ ಭರವಸೆ ನೀಡಿದರು.
ಇ ಸಂದರ್ಭದಲ್ಲಿ ಮುಖಂಡರಾದ ಘೂಳಪ್ಪ ಜತ್ತಿ, ಚಂದ್ರಕಾಂತ ಇಮ್ಮಡಿ ,ಬಸವರಾಜ ಗಲಗಲಿ, ನಾಗಪ್ಪ ಜತ್ತಿ, ಸಿದ್ದರಾಯ ತೇಲಿ,ರವಿ ಕಾಂಬಳೆ,ಭಿರಪ್ಪಾ ಬಾಲೂಶೆ,ಪ್ರಕಾಶ ಡೊಳ್ಳಿ, ಐ ಜಿ ಬಿರಾದರ,ರಫೀಕ ಪಟೇಲ, ಶಿವಾನಂದ ಗೋಲಬಾಂವಿ, ಎಸ್ಎಸ್ ಜಾಬಗೌಡರ, ಅಸ್ಪಕ ಗಟ್ಟನಟ್ಟಿ, ನೀರಾವರಿಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ,ಪ್ರಶಾಂತ ಪೋತದಾರ,ಗುತ್ತಿಗೆದಾರರಾದ ಅಶೋಕ ಕಪ್ಪಲಗುದ್ದಿ ,ಅಕ್ಷಯ ಕಪ್ಪಲಗುದಿ ಇತರರು ಇದ್ದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
Share This Article
error: Content is protected !!