ಶಿರಸಿ : ಕರ್ನಾಟಕ ಸರ್ಕಾರದ ಮಾಜಿ ಸ್ಪೀಕರ್ ಹಾಗೂ ಹಾಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು ಆದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹುಟ್ಟೂರು ಕಾಗೇರಿ ಗ್ರಾಮದ ಹತ್ತಿರ ವಿರುವ ಶಿರಸಿ ಹಾಗೂ ಸಿದ್ದಾಪುರ ರಸ್ತೆಯ ಮದ್ಯ ಭಾಗದಲ್ಲಿ ಬರುವ ಹೊಸಗದ್ದೆ ಗ್ರಾಮದಿಂದ ತಟ್ಟಿಕೈ ಮಾರ್ಗವಾಗಿ ಹಾಳೆ ಗೌರಿ ಸಂಪರ್ಕ ಮಾಡುವ 12 ಕಿಲೋಮೀಟರ್ ನಷ್ಟು ಲೋಕೋಪಯೋಗಿ ರಸ್ತೆಯು ತುಂಬಾ ಹದಗೆಟ್ಟಿದ್ದು ತಗ್ಗುಗುಂಡಿಗಳಾಗಿವೆ. ಇನ್ನೊಂದು ಕಡೆ ಈ pwd ರಸ್ತೆಯ ಮೂಲಕ 10 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಮಾಡಲಾಗುತ್ತದೆ. ಆದ್ರೇ ಈ ಲೋಕೋಪಯೋಗಿ ರಸ್ತೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನದತ್ತ ಹೆಜ್ಜೆಯಿಟ್ಟರೂ ಇಲ್ಲಿಯವರೆಗೆ ಈ Pwd ರಸ್ತೆಗೆ ಡಾಂಬಾರು ಹಾಕದೇ ಇರುವುದು ತುಂಬಾ ವಿಪರ್ಯಾಸದ ಸಂಗತಿಯಾಗಿದೆ.
ಇನ್ನೊಂದು ಕಡೆ ಈ ಭಾಗದ ಪ್ರಭಾವಿ ರಾಜಕಾರಣಿಗಳು, ಸರ್ಕಾರದ ಮಟ್ಟದಲ್ಲಿ ಅತ್ಯುನ್ನತ ವಿವಿಧ ಹುದ್ದೆ ಗಳನ್ನು ಅಲಂಕರಿಸಿ ಈಗ ಸಂಸದರಾಗಿ ಕೇಂದ್ರದತ್ತ ಮುಖಮಾಡಿರುವ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹುಟ್ಟೂರು ಕಾಗೇರಿಗೆ ಹತ್ತಿರ ವಿದ್ರೂ ಸಹ ಈ ರಸ್ತೆಗೆ ಕಾಯಕಲ್ಪ ನೀಡದೇ ಇರುವುದು ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ..! ಇನ್ನೂ ಭಾಗದ ಹೋರಾಟಗಾರರು ಈ ರಸ್ತೆಯನ್ನು ದುರಸ್ತಿಪಡಿಸಿ ಡಾಂಬಾರು ಹಾಕುವಂತೆ ಕಳೆದ 2 ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಈ ಭಾಗದ ಜನಪ್ರತಿನಿಧಿಗಳು ಕ್ಯಾರೇ ಎನ್ನದೇ ಇರುವುದು ನೋಡಿದ್ರೆ ತುಂಬಾ ಬೇಜಾರು ಆಗುತ್ತದೆ.
ಆದ್ದರಿಂದ ಈ ಭಾಗದ ಜನತೆಯ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿ ಕೆನರಾ ಲೋಕ ಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಶಿರಸಿ ಉಪ ವಿಬಾಗದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಡಾಂಬಾರು ಕಾಣದ ಹದಗೆಟ್ಟ pwd ರಸ್ತೆಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಬಸವರಾಜು