Ad imageAd image

ಸಂತ ಪರಂಪರೆಯಲ್ಲಿ ಸೇವಾಲಾಲ ಮಹಾರಾಜ್ ಕೊಡೆಗೆ ಅನನ್ಯ

Bharath Vaibhav
ಸಂತ ಪರಂಪರೆಯಲ್ಲಿ ಸೇವಾಲಾಲ ಮಹಾರಾಜ್ ಕೊಡೆಗೆ ಅನನ್ಯ
WhatsApp Group Join Now
Telegram Group Join Now

ಕಲಘಟಗಿ: ಭಾರತದಲ್ಲಿ ಸಂತ ಪರಂಪರೆಯಲ್ಲಿ ಸಂತ ಸೇವಾಲಾಲ ಮಹಾರಾಜರ ಕೊಡುಗೆ ಅಪಾರವಾಗಿದ್ದು ಅವರ ಬದುಕು ಸರ್ವರಿಗೂ ಮಾದರಿಯಾಗಿದೆ ಎಂದು ತಹಶೀಲ್ದಾರ ವೀರೇಶ ಮುಳಗುಂದಮಠ ಮಾತನಾಡಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ ವತಿಯಿಂದ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೬ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ ಸಮಾಜದಲ್ಲಿ ಚದುರಿಹೋದ ಬಜಾಂರ ಸಮುದಾಯನ್ನು ಗಂಪು,ತಂಡಗಳನ್ನಾಗಿ ಸೇರಿಸಿ ಸಮಾಜಿಕ ಬೌಧ್ದಿಕವಾಗಿ ಸಮಾಜವನ್ನು ಸರ್ವಶಕ್ತರನ್ನಾಗಿಸಿ ಮುಂಚುಣಿಯಲ್ಲಿ ತಂದು ನಿಲ್ಲಿಸಿದ ಕೀರ್ತಿ ಶ್ರೀ ಸಂತ ಸೇವಾಲಾಲ ಮಹಾರಾಜರಿಗೆ ಸಲ್ಲುತ್ತದೆ ಎಂದರು.

ತಾಲೂಕಾ ಬಂಜಾರ ಸಂಘದ ಮಾಜಿ ಅದ್ಯಕ್ಷ ಅರ್ಜುನ ಲಮಾಣಿ ಮಾತನಾಡಿ ಪ್ರತಿಯೊಂದು ಸಮಾಜದ ಸಂತರು ಸಮಾಜಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ ಅವರ ಬದುಕು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಸಾದ್ಯ ಎಂದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಮಂಗಲಪ್ಪ ಲಮಾಣಿ , ಜಿಲ್ಲಾ ಪ್ರಧಾನ ಕಾರ್ಯಧರ್ಶಿ ವಾಸು ಲಮಾಣಿ , ಮಾತನಾಡಿದರು ಬೆಳಿಗ್ಗೆ ಪಟ್ಟಣದ ಹಳಿಯಾಳ ಕ್ರಾಸ್ ಬಳಿಯಿರುವ ಜಾಗದಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಸಿ ಭೋಗ ಕಾರ್ಯಕ್ರಮದ ನೆರವೇರಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಾಯ್ ಸಾವಂತ,ಪಶು ಮುಖ್ಯವೈದ್ಯಾಧಿಕಾರಿ ದೇವೇಂದ್ರಪ್ಪ ಲಮಾಣಿ , ನೌಕರ ಸಂಘದ ಅಧ್ಯಕ್ಷ ಜಗಧೀಶ ವಿರಕ್ತಿಮಠ, ಗ್ರೇಡ 2 ತಹಶಿಲ್ದಾರ ಬಸವರಾಜ ಹೊಂಕಣ್ಣವರ ತಾಲೂಕಾ ಬಂಜಾರ ಸಂಘದ ಅಧ್ಯಕ್ಷ ವಾಸು ಲಮಾಣಿ , ಶಿವಪ್ಪ ಲಮಾಣಿ ,ಕ.ರ,ವೇ( ಪ್ರವೀಣ ಶೆಟ್ಟಿ ಬಣ) ತಾಲೂಕಾ ಅಧ್ಯಕ್ಷ ಶಂಕರಗೌಡ ಭಾವಿಕಟ್ಟಿ, ವಾಚಪ್ಪ ಲಮಾಣಿ ,ರಾಮಚಂದ್ರ ಕಾರಭಾರಿ,ವಾಸು ಲಮಾಣಿ ,ಟೋಪಣ್ಣ ಲಮಾಣಿ ,ಶಂಕರ ಲಮಾಣಿ , ಲಕ್ಷ್ಮಣ ಲಮಾಣಿ , ಹನಮಂತ ಲಮಾಣಿ , ಭಾನಪ್ಪ ಲಮಾಣಿ , , ಕೃಷ್ಣಾ ರಾಥೋಡ್, ಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ ಲಮಾಣಿ ಮಾಡಿದರು.

WhatsApp Group Join Now
Telegram Group Join Now
Share This Article
error: Content is protected !!